Advertisement

Rajasthan: ಟಿಕೆಟ್‌ಗಾಗಿ ಪತಿ-ಪತ್ನಿ ಫೈಟ್‌!

11:28 PM Oct 24, 2023 | Team Udayavani |

ಮನೆಗಳಲ್ಲಿ ಪತಿ -ಪತ್ನಿ ನಡುವೆ ಕದನ ಸಾಮಾನ್ಯ. ಆದರೆ ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ದಂಪತಿ ನಡುವೆ ಭಾರೀ ಕಲಹ ಏರ್ಪಟ್ಟಿದೆಯಂತೆ!
ದಂತಾ ರಾಮಗಡ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಯಿದು. ಹಲವು ವರ್ಷಗಳಿಂದಲೂ ವೀರೇಂದ್ರ ಸಿಂಗ್‌ ಕುಟುಂಬ ಕಾಂಗ್ರೆಸ್‌ ಜತೆಗೇ ಇದೆ. ವೀರೇಂದ್ರ ಅವರ ಪತ್ನಿ ಈ ಬಾರಿ ರಾಮಗಡದ ಟಿಕೆಟ್‌ ನನಗೇ ಕೊಡಬೇಕು ಎಂದು ಕಾಂಗ್ರೆಸ್‌ ನಾಯಕರಿಗೆ ದುಂಬಾಲು ಬಿದ್ದಿದ್ದರು.

Advertisement

ಆದರೆ ಅವರ ಕೋರಿಕೆ ಯನ್ನು ತಿರಸ್ಕರಿಸಿದ ಪಕ್ಷ ಪತಿ ವೀರೇಂದ್ರ ಅವರಿಗೆ ಟಿಕೆಟ್‌ ನೀಡುವುದಾಗಿ ಹೇಳಿತ್ತು. ಇದರಿಂದ ಸಿಟ್ಟಿಗೆದ್ದ ಆಕೆ, ಜನನಾಯಕ ಜನತಾ ಪಾರ್ಟಿಗೆ ಸೇರ್ಪಡೆಯಾಗಿ, ಆ ಪಕ್ಷದ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಈಗ ಒಂದೇ ಕ್ಷೇತ್ರದಲ್ಲಿ ಪತಿ-ಪತ್ನಿ ನಡುವೆ “ರಾಜಕೀಯ ಜಟಾಪಟಿ’ ನಡೆಯುವ ಸಾಧ್ಯತೆಯಿದೆ. ಕ್ಷೇತ್ರದ ಜನ ಪತಿ ಪರವೋ, ಪತ್ನಿ ಪರವೋ ನೋಡಬೇಕು!

Advertisement

Udayavani is now on Telegram. Click here to join our channel and stay updated with the latest news.

Next