Advertisement

ಗುಜ್ಜರ್‌, ಇತರ 4 ಜಾತಿಯವರಿಗೆ ಮೀಸಲಾತಿ: ಮಸೂದೆ ಮಂಡನೆ

09:53 AM Feb 13, 2019 | udayavani editorial |

ಜೈಪುರ : ಗುಜ್ಜರ್‌ ಸಮುದಾಯದವರಿಗೆ ಸರಕಾರದ ಉದ್ಯೋಗ ಮತ್ತು ಶಿಕ್ಷಣಾಯಲಗಳಲ್ಲಿ ಶೇ.5ರ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಇಂದು ಬುಧವಾರ ರಾಜಸ್ಥಾನ ವಿಧಾನಸಭೆಯಲ್ಲಿ ಸರಕಾರ ಮಂಡಿಸಿದೆ. 

Advertisement

ರಾಜಸ್ಥಾನ ಹಿಂದುಳಿದ ವರ್ಗಗಳು (ರಾಜ್ಯದ ಶಿಕ್ಷಣಾಲಯಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ) ಕಲ್ಪಿಸುವ 2019ರ ಮಸೂದೆಯನ್ನು ಸರಕಾರ ಮಂಡಿಸಿತು. ಗುಜ್ಜರ್‌ ಮತ್ತು ಇತರ ಜಾತಿಯವರು ಪ್ರಕೃತ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಚಳವಳಿ ನಿರತರಾಗಿದ್ದಾರೆ. 

ಕೋಟಾ ಆಗ್ರಹಿಸಿ ಕಳೆದ ಶುಕ್ರವಾರ ರಾಜ್ಯಾದ್ಯಂತ ಮುಷ್ಕರನಿರತರಾಗಿರುವ ಗುಜ್ಜರ್‌ ಮತ್ತು ಇತರ ಸಮುದಾಯದವರನ್ನು ಸಮಾಧಾನ ಪಡಿಸುವ ಸಲುವಾಗಿ  ಇಂಧನ ಸಚಿವ ಬಿ ಡಿ ಕಲ್ಲಾ ಅವರು ಮಸೂದೆಯನ್ನು ಮಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next