Advertisement

ಮತ್ತೆ ಸುಪ್ರೀಂ ಅಂಗಳಕ್ಕೆ ರಾಜಸ್ಥಾನ ಬಿಕ್ಕಟ್ಟು

09:17 AM Aug 01, 2020 | mahesh |

ಹೊಸದಿಲ್ಲಿ: ರಾಜಸ್ಥಾನ ಬಿಕ್ಕಟ್ಟು ಮತ್ತೂಮ್ಮೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸಚಿನ್‌ ಪೈಲಟ್‌ ಸೇರಿದಂತೆ 19 ಮಂದಿ ಬಂಡಾಯ ಶಾಸಕರ ವಿರುದ್ಧ ಅನರ್ಹತೆ ವಿಚಾರಣೆ ಮುಂದೂಡುವಂತೆ ರಾಜಸ್ಥಾನ ಹೈಕೋರ್ಟ್‌ ಜು.24ರಂದು ನೀಡಿದ್ದ ಆದೇಶ ಪ್ರಶ್ನಿಸಿ ರಾಜಸ್ಥಾನ ಕಾಂಗ್ರೆಸ್‌ನ ಮುಖ್ಯ ಸಚೇತಕ ಮಹೇಶ್‌ ಜೋಷಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 1992ರಲ್ಲಿ ಕಿಹೋಟೋ ಹೊಲ್ಲೋಹಾನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪರಿಗಣಿಸಿದರೆ, ಹೈಕೋರ್ಟ್‌ ನೀಡಿರುವ ಆದೇಶವು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ಜೋಷಿ ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ. ಅನರ್ಹತೆ ಪ್ರಕ್ರಿಯೆ ನಿರ್ಧರಿಸುವ ಅಧಿಕಾರ ಸ್ಪೀಕರ್‌ಗಿದ್ದು, ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವಂತಿಲ್ಲ ಎಂದು 1992ರ ಸುಪ್ರೀಂ ತೀರ್ಪು ಹೇಳಿತ್ತು ಎಂದು ವಾದಿಸಿದ್ದಾರೆ.

Advertisement

ಶಾಸಕರು ಜೈಸಲ್ಮೇರ್‌ಗೆ ಶಿಫ್ಟ್: ಜೈಪುರ- ದೆಹಲಿ ಹೆದ್ದಾರಿಯಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಬಣದ ಶಾಸಕರು ಶುಕ್ರವಾರ ಜೈಸಲ್ಮೇರ್‌ಗೆ ಶಿಫ್ಟ್ ಆಗಿದ್ದಾರೆ. ಅಧಿವೇಶನ ಆರಂಭವಾಗು ವವರೆಗೂ ಅವರು ಹೋಟೆಲ್‌ಗ‌ಳಲ್ಲೇ ಉಳಿಯಲಿದ್ದಾರೆ. ಈ ನಡುವೆ, ಸರಕಾರ ಪತನಗೊಳಿಸುವ ಸಂಚಿನ ಕುರಿತ ಸಂಭಾಷಣೆಯುಳ್ಳ ಆಡಿಯೋ ಟೇಪ್‌ ಪ್ರಕರಣದ ತನಿಖೆ ಯನ್ನು ವಿಶೇಷ ತಂಡ ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next