Advertisement

Rajasthan;ಖರ್ಗೆ ಅಧ್ಯಕ್ಷರಾದ ಬಳಿಕ 2 ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಬಂದಿದೆ: ಗೆಹ್ಲೋಟ್

07:33 PM Nov 05, 2023 | Team Udayavani |

ಜೋಧ್ ಪುರ: ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅನುಭವಿ ನಾಯಕರಾಗಿದ್ದಾರೆ. ಅವರು ಬಂದ ನಂತರ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಸರ್ಕಾರ ರಚನೆಯಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಈಗ ನಾವು ರಾಜಸ್ಥಾನ, ಮಧ್ಯಪ್ರದೇಶ,ಛತ್ತೀಸ್‌ಗಢ,ತೆಲಂಗಾಣ ಮಿಜೋರಾಂನಲ್ಲಿಯೂ ಸರಕಾರ ರಚಿಸಲಿದ್ದೇವೆ ಎಂದರು.

ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ಜನರು ತಮ್ಮ ಸತ್ಯವನ್ನು ಬಹಿರಂಗಪಡಿಸುತ್ತಿದ್ದಾರೆ.ದೊಡ್ಡ ಆರ್ಥಿಕ ಅಪರಾಧಿಗಳ ವಿರುದ್ಧವೂ ಕ್ರಮ ಜರುಗಿಸಬೇಕೆಂದು ನಾವು ಬಯಸುತ್ತೇವೆ. ಅವರಿಗಾಗಿಯೇ ಇಡಿ, ಸಿಬಿಐ, ಐಟಿ ರಚನೆ ಮಾಡಲಾಗಿದೆ ಎಂದು ಕಿಡಿ ಕಾರಿದರು.

ಇಡಿ ಅಧಿಕಾರಿಗಳು ಹಣ ಸಾಗಿಸುತ್ತಿದ್ದಾರೆ ಎಂದು ಛತ್ತೀಸ್‌ಗಢ ಸಿಎಂ ಹೇಳಿದ್ದನ್ನ ನೀವು ಕೇಳಿರಬೇಕು. ಇದು ಆತಂಕಕಾರಿ ಸಂಗತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next