Advertisement

ಕಾಂಗ್ರೆಸ್‌ ಬಿಕ್ಕಟ್ಟನ್ನು ಬಗೆಹರಿಸಿ ರಾಜಸ್ಥಾನ ಸರಕಾರ ಉಳಿಸಿ: ವರಿಷ್ಠರಿಗೆ ಹಿರಿಯ ಶಾಸಕ

09:52 AM May 30, 2019 | Sathish malya |

ಜೈಪುರ : ಈಗಷ್ಟೇ ಮುಗಿದ 2019ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಕೋಟಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಿರಿಯ ಕಾಂಗ್ರೆಸ್‌ ಶಾಸಕ ರಾಮನಾರಾಯಣ ಮೀಣ ಅವರು ‘ಪಕ್ಷದ ಆಂತರಿಕ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮೂಲಕ ರಾಜ್ಯ ಸರಕಾರ ಸ್ಥಿರವಾಗಿ ಉಳಿಯುವಂತೆ ನೋಡಿಕೊಳ್ಳಿ’ ಎಂಬ ಸಲಹೆಯನ್ನು ಪಕ್ಷದ ವರಿಷ್ಠರಿಗೆ ನೀಡಿದ್ದಾರೆ.

Advertisement

ರಾಜಸ್ಥಾನದಿಂದ ಲೋಕಸಭೆಗೆ ಸ್ಫರ್ಧಿಸಿ ಸೋತಿರುವ 25 ಅಭ್ಯರ್ಥಿಗಳಲ್ಲಿ ಮೀಣ ಅವರೂ ಒಬ್ಬರಾಗಿದ್ದಾರೆ.

‘ಕಾಂಗ್ರೆಸ್‌ ಪಕ್ಷ ತನ್ನ ಆಂತರಿಕ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆಹರಿಯದಿದ್ದರೆ ಭಾರತೀಯ ಜನತಾ ಪಕ್ಷ ಅದರ ದುರ್ಲಾಭ ಪಡೆದು ಸಾಂವಿಧಾನಿಕ ಅವಕಾಶಗಳನ್ನು ತಿರುಚಿ ರಾಜ್ಯದಲ್ಲಿನ ಅಶೋಕ್‌ ಗೆಹಲೋಟ್‌ ಸರಕಾರವನ್ನು ಅಸ್ಥಿರಗೊಳಿಸುತ್ತದೆ; ಆದುದರಿಂದ ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರವನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ವಿವೇಕದಿಂದ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಬೇಕು’ ಎಂದು ಮೀಣ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next