Advertisement

ಮುಸ್ಲಿಂ ಮೌಲ್ವಿಗಳನ್ನು ಭೇಟಿಯಾದ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌

08:35 AM May 01, 2019 | Vishnu Das |

ಲಕ್ನೋ : ಮತಬೇಟೆಯಲ್ಲಿ ನಿರತರಾಗಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಪ್ರಮುಖ ಮುಸ್ಲಿಂ ಮೌಲ್ವಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement

ರಾಜ್‌ನಾಥ್‌ ಸಿಂಗ್‌ ಅವರು ಲಕ್ನೋದ ಈದ್ಗಾ ಇಮಾಮ್‌ ಮೌಲಾನಾ ಖಾಲೀದ್‌ ರಶೀದ್‌ ಫಿರಂಗಿ ಮಹಾಲಿ ಮತ್ತು ಶಿಯಾ ಮೌಲ್ವಿಗಳಾಗಿರುವ ಮೌಲಾನಾ ಅಘಾ ರೂಹಿ ಮತ್ತು ಮೌಲಾನಾ ಯಾಸೂಬ್‌ ಅಬ್‌ಬಾಸ್‌ ಅವರನ್ನುಭೇಟಿಯಾಗಿ ಮಾತುಕತೆ ನಡೆಸಿದರು.

ಲಕ್ನೋದಿಂದ ರಾಜ್‌ನಾಥ್‌ ಸಿಂಗ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿದ್ದು, ಅವರೆದು ಎಸ್‌ಪಿ ಮೈತ್ರಿ ಅಭ್ಯರ್ಥಿಯಾಗಿ ಪೂನಂ ಸಿನ್ಹಾ ಮತ್ತುಕಾಂಗ್ರೆಸ್‌ನಿಂದ ಪ್ರಮೋದ್‌ ಕೃಷ್ಣಮ್‌ ಅವರಿದ್ದಾರೆ.

ಮೇ 6 ರಂದು ಲಕ್ನೋದಲ್ಲಿ ಮತದಾನ ನಡೆಯಲಿದೆ. ಕೇಂದ್ರ ಗೃಹ ಸಚಿವರು ಸ್ಪರ್ಧಿಸುತ್ತಿರುವ ಕಾರಣ ಪ್ರತಿಷ್ಠಿತ ಕ್ಷೇತ್ರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next