Advertisement

“ರಾಜಲಕ್ಷ್ಮೀ’ಚಿತ್ರೀಕರಣ ಜೋರು

10:19 AM Apr 12, 2019 | Lakshmi GovindaRaju |

“ಎಸ್‌.ಕೆ.ಎಂ ಮೂವೀಸ್‌’ ಲಾಂಛನದಲ್ಲಿ ಮೋಹನ್‌ ಕುಮಾರ್‌ ಎಸ್‌.ಕೆ ನಿರ್ಮಿಸುತ್ತಿರುವ “ರಾಜಲಕ್ಷ್ಮೀ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮಂಡ್ಯ, ಮೈಸೂರು, ಬೆಂಗಳೂರು ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

“ರಾಜಲಕ್ಷ್ಮೀ’ ಚಿತ್ರಕ್ಕೆ ಶ್ರೀಕಾಂತ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ನಾಗರಾಜ ಮೂರ್ತಿ ಛಾಯಾಗ್ರಹಣ, ಕಿರಣ್‌-ಅರ್ಜುನ್‌ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಎ.ಟಿ ರವೀಶ್‌ ಸಂಗೀತ ಸಂಯೋಜಿಸಿದ್ದು, ಕಾಂತರಾಜ್‌ ಸಾಹಿತ್ಯ ಮತ್ತು ಮಾಗಡಿ ಯತೀಶ್‌ ಸಂಭಾಷಣೆ ಒದಗಿಸಿದ್ದಾರೆ.

ಹೊನ್ನವಳ್ಳಿ ಕೃಷ್ಣ, ಟೆನ್ನಿಸ್‌ ಕೃಷ್ಣ, ನವೀನ್‌ ತೀರ್ಥಹಳ್ಳಿ, ರಶ್ಮಿ ಗೌಡ, ಚಂದ್ರಪ್ರಭ (ಮಜಾ ಭಾರತ), ಸ್ಟೈಲ್‌ ಶಶಿ, ಸೀತಾರಾಂ, ಮುತ್ತುರಾಜ್‌, ಸದಾನಂದ್‌ ಮುಂತಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಮ ರಾಜ್ಯದಂತಿದ್ದ ಇದ್ದ ಊರೊಂದು ಕಾರಾಣಾಂತರಗಳಿಂದ ರಾವಣ ರಾಜ್ಯದಂತಾಗುತ್ತದೆ.

ಮತ್ತೆ ಆ ಊರು ಹೇಗೆ ರಾಮ ರಾಜ್ಯ ಆಗುತ್ತದೆ ಎಂಬ ಕಥಾಹಂದರ ಇರುವ ಈ ಚಿತ್ರದಲ್ಲಿ ಒಂದು ನವಿರಾದ ಲವ್‌ಸ್ಟೋರಿ ಕೂಡ ಇದೆಯಂತೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿದ್ದು, ಇದೇ ಆಗಷ್ಟ್ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next