Advertisement

ರಾಜ್ಯದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ

06:40 AM Oct 16, 2018 | Team Udayavani |

ಬೆಂಗಳೂರು: ಚಂಡಮಾರುತದ ಪರಿಚಲನೆಗಳಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ಪರಿಚಲನೆಗಳ ಪ್ರಭಾವ ಹೆಚ್ಚಾಗಲಿದೆ. ಇದರ ಪರಿಣಾಮ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅದರಂತೆ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಪರಿಣಾಮ ದಕ್ಷಿಣ ಒಳನಾಡು ಹಾಗೂ ಕಾರಾವಳಿಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ.

ಭಾನುವಾರ ಟಿ.ನರಸೀಪುರದಲ್ಲಿ 9 ಸೆಂಟಿ ಮೀಟರ್‌ ಮಳೆಯಾಗಿದ್ದು, ಕೊಳ್ಳೆಗಾಲದಲ್ಲಿ 8 ಸೆಂಟಿ ಮೀಟರ್‌ ಮಳೆಯಾಗಿದೆ. ಉಳಿದಂತೆ ಭಾಗಮಂಡಲ, ಕೆ.ಆರ್‌.ಪೇಟೆ, ಮಾಲೂರು, ಆನೇಕಲ್‌ 5, ಚಾಮರಾಜನಗರ, ಹಿರಿಯೂರು, ರಾಮನಗರ, ಚನ್ನಪಟ್ಟಣ 4, ಮಂಗಳೂರು, ಪೊನ್ನಂಪೇಟೆ, ಶ್ರೀರಂಗಪಟ್ಟಣ, ಮಂಡ್ಯ, ತಿಪಟೂರು 3, ಕೊಲ್ಲೂರು, ಚನ್ನರಾಯಪಟ್ಟಣ, ಕೃಷ್ಣರಾಜ ಸಾಗರ, ಬೇಲೂರು, ಮಳವಳ್ಳಿ, ಮದ್ದೂರು 2, ಸಿದ್ದಾಪುರ, ಕುಮಟಾ, ಸೋಮವಾರಪೇಟೆ, ಭದ್ರಾವತಿ, ಹೊಳೆನರಸೀಪುರ, ಹಾಸನ, ಮೈಸೂರು ಸೇರಿದಂತೆ ಹಲವೆಡೆ 1 ಸೆ. ಮೀ. ಮಳೆಯಾಗಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮುಂದಿನ ಎರಡು ದಿನಗಳು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುರೆಯಲಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next