Advertisement

ನಗರದಲ್ಲಿಂದು ಮಳೆ ಸಾಧ್ಯತೆ

12:14 PM Oct 21, 2018 | Team Udayavani |

ಬೆಂಗಳೂರು: ನೈರುತ್ಯ ಮುಂಗಾರು ದೇಶದಿಂದ ಪೂರ್ಣವಾಗಿ ಹಿಂದೆ ಸರಿಯಲಿದ್ದು, ಬಳಿಕ ಹಿಂಗಾರು ಆಗಮನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

Advertisement

ಅಕ್ಟೋಬರ್‌ ಎರಡನೇ ವಾರದಲ್ಲಿಯೇ ನೈರುತ್ಯ ಮುಂಗಾರು ಹಿಂದೆ ಸರಿಯಬೇಕಿದ್ದರೂ, ಇತ್ತೀಚೆಗೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದಿಂದಾಗಿ ಕೆಲವೆಡೆ ಮಳೆ ಚರುಕುಗೊಂಡಿತ್ತು. ಇದೀಗ ಮುಂಗಾರು ಸಂಪೂರ್ಣವಾಗಿ ಕ್ಷೀಣಿಸಿದ್ದು, ಭಾನುವಾರ ಸಂಜೆಯೊಳಗೆ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

ನೈರುತ್ಯ ಮುಂಗಾರು ಹಿಂದೆ ಸರಿದ ಬಳಿಕ ಹಿಂಗಾರು ಆಗಮನವಾಗಲಿದ್ದು, ಪರಿಣಾಮವಾಗಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮತ್ತೆ ಮಳೆ ಆರಂಭವಾಗಲಿದೆ. ಬೆಂಗಳೂರಿನಲ್ಲಿಯೂ ಮಳೆಯಾಗುವ ಸಾಧ್ಯತೆಗಳಿವೆ.

ಈಗಾಗಲೇ ಕರಾವಳಿಯಲ್ಲಿ ಮೇಲ್ಮೆ„ ಸುಳಿಗಾಳಿ ಕಾಣಿಸಿಕೊಂಡಿದ್ದು, ಭಾನುವಾರ ಕರಾವಳಿಯ ಎಲ್ಲೆಡೆ, ದಕ್ಷಿಣ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಮಂಡ್ಯ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next