Advertisement

ಹಲವೆಡೆ ಮಳೆ ಅವಘಡ: ಮತ್ತಿಬ್ಬರ ದುರ್ಮರಣ

07:05 AM Jul 26, 2018 | Team Udayavani |

ಬೆಂಗಳೂರು: ಮಲೆನಾಡು, ಕರಾವಳಿ, ಕೊಡಗು ಸೇರಿ ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. 

Advertisement

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ವೇಳೆ ತುಂತುರು ಮಳೆಯಾಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ
ಮುಂದುವರಿದಿದ್ದು, ಎನ್‌ಆರ್‌ಪುರ ತಾಲೂಕಿನ ಗಾಂಧಿ ಗ್ರಾಮದಲ್ಲಿ ಮಳೆಯಿಂದ ಆಶ್ರಯ ಮನೆಯ ಗೋಡೆ ಕುಸಿದು ಅಂಗವಿಕಲ ಮಹಿಳೆ, ಮಾರಿಯಮ್ಮ (60) ಎಂಬುವರು ಮೃತಪಟ್ಟಿದ್ದಾರೆ.

ಇದೇ ವೇಳೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಕಾರೇಕುಂಬ್ರಿಯಲ್ಲಿ ಮಂಗಳವಾರ ರಾತ್ರಿ ಮೀನು ಹಿಡಿಯಲು ಹೋಗಿದ್ದ ಕಾರೇಕುಂಬ್ರಿ ಚಂದ್ರಶೇಖರ್‌ (60) ಎಂಬುವರು ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next