Advertisement

ತಾಲೂಕಿನಾದ್ಯಂತ ಮಳೆ ಇಳಿಕೆ, ಮನೆ ಕುಸಿತ

04:18 PM Jun 17, 2018 | Team Udayavani |

ಪುತ್ತೂರು: ಶುಕ್ರವಾರ ಹಾಗೂ ಶನಿವಾರದ 48 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

Advertisement

ಒಟ್ಟು 61.4 ಮಿ.ಮೀ. ಮಳೆ
ಪುತ್ತೂರು ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 61.4 ಮಿ.ಮೀ. ಹಾಗೂ ಸರಾಸರಿ 10.23 ಮಿ.ಮೀ. ಮಳೆಯಾಗಿದೆ. ಪುತ್ತೂರು ನಗರದಲ್ಲಿ 12.4 ಮಿ. ಮೀ., ಉಪ್ಪಿನಂಗಡಿಯಲ್ಲಿ 8.8ಮಿ. ಮೀ., ಶಿರಾಡಿಯಲ್ಲಿ 16.8 ಮಿ.ಮೀ., ಕೊಯಿಲದಲ್ಲಿ 5.2 ಮಿ.ಮೀ., ಐತೂರುನಲ್ಲಿ 10.6ಮಿ.ಮೀ., ಕಡಬದಲ್ಲಿ 8.4 ಮಿ.ಮೀ. ಮಳೆ ಸುರಿದಿದೆ.

ಮನೆಯ ಮಾಡು ಕುಸಿತ
ನಗರಸಭೆ ವ್ಯಾಪ್ತಿಯ ಬ್ರಹ್ಮನಗರದಲ್ಲಿ ಮಾಡು ಕುಸಿದು ಬಿದ್ದು, ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟು ಮಾಡಿದ ಘಟನೆ ನಡೆದಿದೆ. ಬ್ರಹ್ಮನಗರ ದಲಿತ ಕಾಲನಿಯ ಪಿಜಿನ ಅವರ ಮನೆಯ ಮಾಡು ಶುಕ್ರವಾರ ರಾತ್ರಿ ಮುರಿದು ಬಿದ್ದಿದ್ದು, ಮನೆ ಮಂದಿ ಹೊರಭಾಗದಲ್ಲಿದ್ದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಇದು ಸರಕಾರ ನಿರ್ಮಿಸಿಕೊಟ್ಟ ಮನೆಯಾಗಿದ್ದು, ಘಟನಾ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಈ ಕುಟುಂಬ ತಿಳಿಸಿದೆ. ಇವರ ಪುತ್ರ ಕೃಷ್ಣಪ್ಪ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next