Advertisement

ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ

01:04 PM Jun 01, 2020 | Suhan S |

ಗದಗ: ಗದಗ- ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರವಿವಾರ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಇದೇ ವೇಳೆ ಮುಂಡರಗಿ ಪಟ್ಟಣದಲ್ಲಿ ವಿದ್ಯುತ್‌ ತಂತಿ ಹರಿದು ಎಮ್ಮೆಯೊಂದು ಮೃತಪಟ್ಟಿದೆ.

Advertisement

ಅವಳಿ ನಗರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಕೆಲಕಾಲ ಬಿರುಸಿನ ಮಳೆ ಸುರಿಯಿತು. ಹಳೇ ಡಿಸಿ ಆಫೀಸ್‌ ಸರ್ಕಲ್‌, ಗಾಂಧಿ ವೃತ್ತ ಹಾಗೂ ತೋಂಟದಾರ್ಯ ಮಠದ ಹೆಬ್ಟಾಗಿಲು ಬಳಿ ಎರಡು ಅಡಿ ಎತ್ತರದಷ್ಟು ನೀರು ಹರಿಯಿತು. ಹೊಂಬಳ ನಾಕಾ, ಜನತಾ ಕಾಲೋನಿ ಸೇರಿದಂತೆ ಅವಳಿ ನಗರದ ವಿವಿಧೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಬಿರುಗಾಳಿ ಸಹಿತ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ವಿದ್ಯುತ್‌ ತಂತಿಗಳ ಮೇಲೆ ಒರಗಿದ್ದರಿಂದ ನಗರದಲ್ಲಿ ಕೆಲಕಾಲ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಇನ್ನುಳಿದಂತೆ ಜಿಲ್ಲೆಯ ನರೇಗಲ್‌ ಪಟ್ಟಣ, ಅಬ್ಬಿಗೇರಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ರವಿವಾರ ಸಂಜೆ ಸಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.

ನರಗುಂದ ಪಟ್ಟಣದಲ್ಲಿ ರವಿವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದ್ದು, ಬಿರುಗಾಳಿ ಸಹಿತ ಗುಡುಗು, ಮಿಂಚು ಜೋರಾಗಿತ್ತು. ಮುಂಡರಗಿ ಪಟ್ಟಣದಲ್ಲೂ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಗಿದೆ. ಇದೇ ವೇಳೆ ಪಟ್ಟಣದ ಸ್ಮಶಾನವೊಂದರಲ್ಲಿ ಹುಲ್ಲು ಮೇಯುತ್ತಿದ್ದ ಎಮ್ಮೆ ಮೇಲೆ ವಿದ್ಯುತ್‌ ತಂತಿ ಹರಿದು ಬಿದ್ದಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next