Advertisement

ಮಳೆ ಚುರುಕು, ಚರಂಡಿ ನಿರ್ಮಾಣಕ್ಕೆ ವೇಗ

10:59 PM Jun 14, 2020 | Sriram |

ಉಡುಪಿ: ಮಳೆಗಾಲ ಚುರುಕಾಗಿದ್ದು, ನಗರದ ಅಲ್ಲಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೂಡ ಬಿರುಸಿನಿಂದ ನಡೆಯುತ್ತಿದೆ.

Advertisement

ಅಜ್ಜರಕಾಡು ಪುರಭವನದಿಂದ ಮಹಾತ್ಮಾ ಗಾಂಧಿ ಕ್ರೀಡಾಂಗಣ ಸಂಪರ್ಕಿ ಸುವ ರಸ್ತೆ, ಉಡುಪಿ- ಮಣಿಪಾಲ ನಡುವಿನ ರಾ.ಹೆದ್ದಾರಿಯ ವಿವಿಧ ಕಡೆಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಮಳೆ ಸಂದರ್ಭ ನೀರು ರಸ್ತೆ ಮೇಲೆ ಹರಿಯುವುದರಿಂದ ಹೆಚ್ಚು ಸಮಸ್ಯೆಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

ಸಿಂಡಿಕೇಟ್‌ ಬ್ಯಾಂಕ್‌ ವೃತ್ತ, ಇಂದ್ರಾಳಿ ಮುಂತಾದ ಕಡೆಗಳಲ್ಲಿ ಅತೀ ಹೆಚ್ಚು ಸಮಸ್ಯೆಯಾಗುತ್ತಿದ್ದು, ಈ ಜಾಗಗಳಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನೊಂದೆಡೆ ನಗರಸಭೆ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಕೂಡ ಮುಚ್ಚಿ ಹೋದ ಚರಂಡಿಗಳ ಮರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next