Advertisement

ರಾಜ್ಯದ ವಿವಿಧೆಡೆ ಮಳೆ

10:25 AM Apr 17, 2017 | Karthik A |

ಬೆಂಗಳೂರು: ಬಿಸಿಲಿನ ಧಗೆ ಹಾಗೂ ಬಿಸಿಗಾಳಿಯ ಆತಂಕದ ನಡುವೆಯೇ ಬೆಂಗಳೂರು ಸಹಿತ ರಾಜ್ಯದ ಅಲ್ಲಲ್ಲಿ  ರವಿವಾರ ಸುರಿದ ಮಳೆ ತಂಪೆರೆಯಿತು. ದಕ್ಷಿಣ ಒಳನಾಡಿನ ಮಂಡ್ಯ, ತುಮಕೂರು, ಮೈಸೂರು, ರಾಮನಗರ ಮತ್ತಿತರ ಕಡೆಗಳಲ್ಲಿ ಸಂಜೆ ಉತ್ತಮ ಮಳೆಯಾಗಿದೆ. ಇದು ಮುಂಗಾರುಪೂರ್ವ ಮಳೆಯಾಗಿದ್ದು, ಯಾವುದೇ ಹವಾಮಾನ ಬದಲಾವಣೆ ಕಾರಣವಲ್ಲ. ಆದರೆ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹೊರತುಪಡಿಸಿದರೆ, ಉಳಿದೆಡೆ ಮಳೆಯ ಸುಳಿವಿಲ್ಲ. ಅಲ್ಲಿ ಎಂದಿನಂತೆ ಬಿಸಿಲಿನ ಧಗೆ ಮುಂದುವರಿದಿದೆ. ಸೋಮವಾರ ಕೂಡ ರಾಜ್ಯದಲ್ಲಿ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next