Advertisement

Rain ಬೆಳ್ತಂಗಡಿಯ ಕೆಲವೆಡೆ ಮಳೆ

11:44 PM Dec 01, 2023 | Team Udayavani |

ಬೆಳ್ತಂಗಡಿ/ಮಂಗಳೂರು: ಕೆಲವು ದಿನಗಳಿಂದ ವಿರಳವಾಗಿದ್ದ ಮಳೆ ಶುಕ್ರವಾರ ಮತ್ತೆ ಕಾಣಿಸಿಕೊಂಡಿದ್ದು, ಮಡಂತ್ಯಾರು – ಬೆಳ್ತಂಗಡಿ ನಡುವೆ ಸಂಜೆ ವೇಳೆಗೆ ಸುರಿದಿದೆ.

Advertisement

ಕಡಿರುದ್ಯಾವರ ಪರಿಸರದಲ್ಲಿ ಅಪರಾಹ್ನ ಮಳೆ ಸುರಿದಿದೆ. ಉಳಿದಂತೆ ಉಜಿರೆ, ಧರ್ಮಸ್ಥಳ, ಕಾರ್ಕಳ ಚಾರ್ಮಾಡಿ, ಪುತ್ತೂರಿನ ಕೆಲವು ಕಡೆ ಮಳೆಯಾಗಿದೆ. ಗುರುವಾರವೂ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಾಗಿತ್ತು.

ಕರಾವಳಿ ಭಾಗದಲ್ಲಿ ಹಿಂಗಾರು ಕ್ಷೀಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಶುಕ್ರವಾರ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ದಿನವಿಡೀ ಸೆಕೆಯ ಬೇಗೆ ಹೆಚ್ಚಿತ್ತು.

ಭಾರತೀಯ ಹವಾಮಾನ ಇಲಾಖೆ ಮುನ್ಸೂನಚೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next