Advertisement

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಳೆ

01:29 AM Apr 30, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ವೇಳೆಗೆ ಮಳೆಯಾಗಿದೆ. ವೇಣೂರಿನಲ್ಲಿ ಗುಡುಗು ಸಹಿತ ಹನಿ ಮಳೆಯಾಗಿದೆ. ಧರ್ಮಸ್ಥಳ, ಮುಂಡಾಜೆ, ನಿಡ್ಲೆ ಭಾಗದಲ್ಲಿಯೂ ಮಳೆ ಬಂದಿದೆ.

Advertisement

ಬೆಳ್ತಂಗಡಿಯಲ್ಲಿ ಹನಿ ಮಳೆಯಾದರೆ, ಸುಬ್ರಹ್ಮಣ್ಯ ಪರಿಸರದ ಮಡಪ್ಪಾಡಿಯಲ್ಲಿ ಉತ್ತಮ ಮಳೆಯಾಗಿದೆ. ಬಳ್ಪ, ಕೋಡಿಗದ್ದೆಯಲ್ಲಿ ಸಾಧಾರಣ ಮಳೆ ಬಂದಿದೆ. ಏನೆಕಲ್ಲು ಪರಿಸರದಲ್ಲಿ ಮಿಂಚು ಜೋರಾಗಿತ್ತು. ಮಂಗಳೂರಿನಲ್ಲಿ ಸೆಕೆ ಹೆಚ್ಚಿತ್ತು.

ಇಂದೂ ಮಳೆ: ಫೋನಿ ಚಂಡಮಾರುತವು ಆಂಧ್ರಪ್ರದೇಶದಿಂದ ಅಂದಾಜು ಒಂದು ಸಾವಿರ ಕಿ.ಮೀ. ದೂರದಲ್ಲಿದ್ದು, ಪಶ್ಚಿಮ ಬಂಗಾಲ ಹಾಗೂ ಒಡಿಶಾಕ್ಕೆ ಮೇ 3ರ ವೇಳೆಗೆ ಕಾಲಿಡಲಿದೆ. ಚಂಡಮಾರುತದ ಪರಿಣಾಮ ಕರಾವಳಿ ಭಾಗಗಳಲ್ಲಿ ಮಂಗಳವಾರವೂ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿ ಸುನಿಲ್‌ ಗವಾಸ್ಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next