Advertisement

ಕೋಟೇಶ್ವರ ಪರಿಸರದಲ್ಲಿ ಎರಡು ದಿನಗಳಿಂದ ಮಳೆ

10:54 PM May 01, 2019 | Team Udayavani |

ಕೋಟೇಶ್ವರ: ಕಳೆದ 2 ದಿನಗಳಿಂದ ಬೆಳಗ್ಗಿನ ಜಾವ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿನ ಬೇಗೆಗೆ ತಂಪೆರಚಿದೆ.

Advertisement

ಕೋಟೇಶ್ವರ,ಬೀಜಾಡಿ,ಗೋಪಾಡಿ,ವಕ್ವಾಡಿ,ಕಾಳಾವರ ಪರಿಸರದಲ್ಲಿ 2 ದಿನ ಗಳಿಂದ ಮಳೆಯಾಗುತ್ತಿದೆ.ಇದರಿಂದ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಬರಿ ದಾಗುತ್ತಿರುವ ಬಾವಿ,ಒಣಗುತ್ತಿರುವ ಮರ-ಗಿಡಗಳಿಗೆ ಸುರಿಯುತ್ತಿರುವ ಮಳೆ ಚೇತರಿಕೆ ನೀಡಿದೆ.

ಹೂಳೆತ್ತದ ಒಳಚರಂಡಿ
ಈ ಭಾಗದ ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ನೀರು ಹೊರಗೆ ಹರಿದು ಹೋಗಲು ಒಳಚರಂಡಿ ಸಮರ್ಪಕವಾಗಿಲ್ಲ.ಮಳೆಗಾಲ ಮೊದಲು ಇವುಗಳ ಹೂಳೆತ್ತದಿದ್ದಲ್ಲಿ ಅಲ್ಲಲ್ಲಿ ನೀರು ಸಂಗ್ರಹವಾಗಿ ಕೃತಕ ನೆರೆ ಸಾಧ್ಯತೆ ಇದೆ. ಇನ್ನು ಕೆಲವಡೆ ಚರಂಡಿ ಮಾಯವಾಗಿದ್ದು, ಮನೆಗಳ ಕಾಂಪೌಂಡ್‌ಗಳು ಆಕ್ರಮಿಸಿಕೊಂಡಿವೆ.

ರಾ. ಹೆದ್ದಾರಿ 66 ಅವಾಂತರ
ರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ನೀರಿನ ಹೊರಹರಿವಿಗೆ ವ್ಯವಸ್ಥೆ ಮಾಡಿಲ್ಲ.ಚರಂಡಿ ವ್ಯವಸ್ಥೆ ಇಲ್ಲದಿ ರುವುದರಿಂದ ಹೆದ್ದಾರಿ ಜಲಾವೃತಗೊಳ್ಳುವುದು ಖಚಿತವಾಗಿದೆ. ಗುತ್ತಿಗೆದಾರ ಕಂಪೆನಿ ಕೆಲಸವನ್ನು ಅರ್ಧಂಬರ್ಧ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next