Advertisement
ಭಾಗೀರಥಿಯವರಿಗೆ ವಯಸ್ಸಾಗಿದ್ದು, ನಡೆದಾಡಲು ಕಷ್ಟಪಡುವಂತಾಗಿದೆ. ಇವರ ಪತಿ ಬಾಬು ಮೂಲ್ಯ ಅವರು ನಿಧನರಾಗಿದ್ದು, ಅಸೌಖ್ಯಕ್ಕೊಳಗಾಗಿರುವ ಒಬ್ಬಳು ಮಗಳು ಹಾಗೂ ಇನ್ನೊಬ್ಬಳು ಮಗಳು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಡತನದಲ್ಲಿರುವ ಈ ಕುಟುಂಬಕ್ಕೆ ಮನೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನವೀನ್ ಕುಮಾರ್ ಮೇನಾಲ ಸ್ಥಳಕ್ಕೆ ಭೇಟಿ ನೀಡಿ ಸುಳ್ಯ ತಹಶೀಲ್ದಾರ್ ಎಂ.ಎಂ. ಗಣೇಶ್ ಹಾಗೂ ಅಜ್ಜಾವರ ಗ್ರಾಮ ಕರಣಿಕರಾದ ಶರತ್ ಅವರಿಗೆ ಮಾಹಿತಿ ನೀಡಿ ನೆರವು ನೀಡುವಂತೆ ಮನವಿ ನೀಡಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ಅವರು ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಗ್ರಾಮ ಕರಣಿಕರಿಗೆ ಸೂಚಿಸಿದ್ದಾರೆ. Advertisement
ಮೇನಾಲ: ಕುಸಿದು ಬಿದ್ದ ಮನೆಯ ಗೋಡೆ
03:30 AM Jul 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.