Advertisement

ಬಾದಾಮಿ ರೇಲ್ವೆ ನಿಲ್ದಾಣಕ್ಕೆ ಅಧಿಕಾರಿಗಳ ಭೇಟಿ : ಹೋರಾಟ ಸಮಿತಿಯಿಂದ ಮನವಿ ಸಲ್ಲಿಕೆ

09:35 AM Aug 21, 2022 | Team Udayavani |

ಬಾಗಲಕೋಟೆ : ಶನಿವಾರ ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯದ ವಿಭಾಗೀಯ ರೇಲ್ವೆ ವ್ಯವಸ್ಥಾಪಕ(ಡಿ.ಆರ್.ಎಂ) ಅರವಿಂದ ಮಾಲ್ಕಡೆ ವಿಶೇಷ ಪರಿಶೀಲನಾ ರೈಲಿನಲ್ಲಿ ಬಾದಾಮಿಗೆ ಆಗಮಿಸಿ ಪರಿಶೀಲಿಸಿದರು.

Advertisement

ಇದೇ ಸಂದರ್ಭದಲ್ಲಿ ಬಾದಾಮಿ ಹೋರಾಟ ಸಮಿತಿಯಿಂದ ರೈಲ್ವೆ ಬೇಡಿಕೆಗಳ ಕುರಿತು ಮನವಿ ಪತ್ರ ಕೊಡಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಹಿರೇಹಾಳ, ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಮಾತನಾಡಿ ಪ್ರಮುಖ ಬೇಡಿಕೆಗಳಾದ ಯಶವಂತಪುರ ಬಿಕನೇರ್ ರೈಲನ್ನು ಬಾದಾಮಿಯಲ್ಲಿ ನಿಲುಗಡೆ ಮಾಡಬೇಕು, ಗೇಟ್ ನಂ.34 ಬಾಗಲಕೋಟೆ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು, ವಿಜಯಪುರ ಹಂಪಿ ಗೆ ಹೊಸ ರೈಲು ಆರಂಭ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸೋಮಣ್ಣ ಬಿಂಗೇರಿ, ರಮೇಶ ನಾಲತವಾಡ, ಸಂಗಮೇಶ ಲೋಕಾಪುರ, ಹುಚ್ಚಪ್ಪ ಬೆಳ್ಳಿಗುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ದಾಖಲೆ ಪೂರ್ಣವಾಗಿದ್ದರೆ ತತ್‌ಕ್ಷಣ ತೀರ್ಮಾನ : ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

Advertisement

Udayavani is now on Telegram. Click here to join our channel and stay updated with the latest news.

Next