Advertisement

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

01:50 AM Oct 25, 2024 | Team Udayavani |

ತಿರುವನಂತಪುರ: ಕೇರಳದ ತ್ರಿಶೂರ್‌ನಲ್ಲಿರುವ ಚಿನ್ನಾಭರಣಗಳ ತಯಾರಿಕಾ ಘಟಕಗಳ ಮೇಲಿನ ಬೃಹತ್‌ ಶೋಧ ಕಾರ್ಯಾಚರಣೆಯಲ್ಲಿ ಕೇರಳದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಅಧಿಕಾರಿಗಳು 104 ಕೆ.ಜಿ ದಾಖಲೆ ಇಲ್ಲದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಅದರ ಮೌಲ್ಯ 75 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಅದು ರಾಜ್ಯದಲ್ಲಿ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ. ಅದಕ್ಕಾಗಿ 6 ತಿಂಗಳ ಕಾಲ ಸಿದ್ಧತೆ, ತರಬೇತಿಯನ್ನೂ ಅಧಿಕಾರಿಗಳಿಗೆ ನೀಡಲಾಗಿತ್ತು. 78 ಪ್ರದೇಶಗಳಲ್ಲಿ 700 ಮಂದಿ ಅಧಿಕಾರಿಗಳು ಶೋಧ ನಡೆಸಿದ್ದರು ಎಂದು ಜಿಎಸ್‌ಟಿ ಗುಪ್ತಚರ ವಿಭಾಗದ ಉಪ ಆಯುಕ್ತ ದಿನೇಶ್‌ ಕುಮಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next