Advertisement

ಕ್ಷೌರಿಕ ಅಂಗಡಿ ತೆರೆಯಲು ಅನುಮತಿ ನೀಡಿ

03:31 PM May 07, 2020 | Naveen |

ರಾಯಚೂರು: ಲೌಕ್‌ಡೌನ್‌ನಿಂದ ಮುಚ್ಚಿಸಿರುವ ಕ್ಷೌರಿಕ ಅಂಗಡಿ ತೆರೆಯಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸವಿತಾ ಸಮಾಜದವರು ಕ್ಷೌರಿಕ ವೃತ್ತಿ ನಂಬಿ ಬಾಳುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಆದಾಯವಿಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಿತ್ಯ ಕೆಲಸ ಮಾಡಿದರೆ ಮಾತ್ರ ಉಪಜೀವನ ನಡೆಸಲು ಸಾಧ್ಯ. ಈಗಾಗಲೇ ಎಲ್ಲ ವಹಿವಾಟು ಮಾಡಲು ಸರ್ಕಾರ ಅವಕಾಶ ನೀಡಿದೆ. ಅದರಂತೆ ಕ್ಷೌರಿಕ ಅಂಗಡಿಗೂ ಅನುಮತಿ ನೀಡಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಟೋಕನ್‌ ಮಾದರಿಯಲ್ಲಿ ಅವಕಾಶ ನೀಡಲಾಗಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಅವಕಾಶ ನೀಡುವಂತೆ ಕೇಳಿಕೊಂಡರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ ಇಟಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ಇಟಗಿ, ತಾಲೂಕು ಅಧ್ಯಕ್ಷ ಭೀಮೇಶ ಗುಂಜಳ್ಳಿ. ನಗರ ಅಧ್ಯಕ್ಷ ವಿ. ಗೋವಿಂದ, ಸದಸ್ಯರಾದ ವಡವಾಟಿ ಗೋಪಾಲ, ಉರುಕುಂದಪ್ಪ, ಎಂ.ರಾಮಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next