Advertisement

ವಲಸೆ ಕಾರ್ಮಿಕರ ಸುರಕ್ಷತೆಗೆ ಒತ್ತು ಕೊಡಿ

06:20 PM May 29, 2020 | Naveen |

ರಾಯಚೂರು: ಈ ರಾಜ್ಯದಿಂದ ಬೇರೆ ಕಡೆ ಹೋಗುವವರು, ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವ ವಲಸೆ ಕಾರ್ಮಿಕರಿಗೆ ಸುರಕ್ಷಿತ ಪ್ರಮಾಣದ ವ್ಯವಸ್ಥೆ ಮಾಡುವಂತೆ ಅಖೀಲ ಭಾರತ ಸಾಂಸ್ಕೃತಿಕ ಸಂಘಟನೆ ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಗುರುವಾರ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಕೆಲವಿಲ್ಲದೇ ದೇಶದ ನಾನಾ ರಾಜ್ಯಗಳಿಗೆ, ಅಲ್ಲಿಂದ ಇಲ್ಲಿಗೆ ಲಕ್ಷಾಂತರ ಕಾರ್ಮಿಕರು ವಲಸೆ ಹೋಗಿದ್ದಾರೆ. ಆದರೆ, ಕೋವಿಡ್ ಲಾಕ್‌ಡೌನ್‌ನಿಂದ ಅಲ್ಲಿಂದ ಬರುವವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಎಷ್ಟೋ ಜನ ನೂರಾರು ಕಿಮೀ ನಡೆದೇ ಬರುತ್ತಿದ್ದಾರೆ. ಮಕ್ಕಳು ಸರಕು ಸರಂಜಾಮು ಸಮೇತ ನಡೆದು ನಡೆದು ಬಸವಳಿಯುತ್ತಿದ್ದಾರೆ. ಅಂಥ ಕಾರ್ಮಿಕರಿಗೆ ಯೋಗ್ಯವಾದ ಆಹಾರ, ವಸತಿ ವೈದಕೀಯ ಚಿಕಿತ್ಸೆಯನ್ನು ವ್ಯವಸ್ಥೆಯೊಂದಿಗೆ ಸುರಕ್ಷಿತ ರೀತಿಯಲ್ಲಿ ಊರುಗಳಿಗೆ ತಲುಪಲು ಆಯಾ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರು, ಐಸಿಡಿಎಸ್‌, ಬಿಸಿಯೂಟದವರಿಗೆ ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಬೇಕು. ಕೆಲಸದ ಸಮಯವನ್ನು 8ರಿಂದ 10 ಗಂಟೆಯವರೆಗೆ ವಿಸ್ತರಿಸಿರುವ ನಿರ್ಧಾರ ಕೈ ಬಿಡಬೇಕು, ಬಡ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸೂಕ್ತ ಹಣ ಸಹಾಯ ಮಾಡಬೇಕು. ಕೌಟುಂಬಿಕ ದೌರ್ಜನ್ಯ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು, ಮದ್ಯಮಾರಾಟ ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿದರು. ಸಂಘಟನೆ ಜಿಲ್ಲಾ ಸಂಚಾಲಕಿ ಉಮಾ ಮಹೇಶ್ವರಿ, ಸದಸ್ಯರಾದ ಗಾಯತ್ರಿ, ಸಂಗೀತಾ, ಮೀನಾಕ್ಷಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next