Advertisement

ಹೋಂ ಕ್ವಾರಂಟೈನ್‌ನಿಂದ ಹೊರಗೆ ಬಂದರೆ ಕಠಿಣ ಕ್ರಮ

06:07 PM May 29, 2020 | Naveen |

ರಾಯಚೂರು: ಕೋವಿಡ್‌ 19 ಶಂಕೆ ಹಿನ್ನೆಲೆಯಲ್ಲಿ ಗೃಹ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ತಮ್ಮ ಮನೆಗಳಿಂದ ಹೊರಗೆ ಓಡಾಡಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಅವರು ಎಚ್ಚರಿಕೆ ನೀಡಿದ್ದಾರೆ.

Advertisement

ಮೊದಲನೇ ಬಾರಿ ಗೃಹ ಕ್ವಾರಂಟೈನ್‌ ಉಲ್ಲಂಘಿಸಿದವರಿಗೆ ದೂರವಾಣಿ ಸಂದೇಶದ ಮೂಲಕ ಎಚ್ಚರಿಕೆ ನೀಡಲಾಗುವುದು. ಎರಡನೇ ಬಾರಿ ಉಲ್ಲಂಘಿಸಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಗೆ ದಾಖಲಿಸಲಾಗುವುದು. ಕ್ವಾರಂಟೈನ್‌ ವ್ಯಕ್ತಿಗಳ ಸಂಪರ್ಕ ಮತ್ತು ನಿಖರ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳು ಕಲೆ ಹಾಕುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next