Advertisement

ರಾಯಚೂರು: ಕೋರ್ಟ್ ಗೆ ಬರುವ ವೇಳೆ ಮೂವರು ವಿಚಾರಣಾಧೀನ ಕೈದಿಗಳು ಪರಾರಿ

04:40 PM Apr 21, 2022 | Team Udayavani |

ರಾಯಚೂರು: ಇಲ್ಲಿನ 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತರುವ ವೇಳೆ ಮೂವರು ವಿಚಾರಣಾಧೀನ ಕೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

Advertisement

ಮಹಾರಾಷ್ಟ್ರ ಮೂಲದ ಎ1 ಹರ್ಷ, ಎ2 ಇಷ್ರಾಮ್ ಹಾಗೂ ಎ4 ಪಲ್ಲು ಗೋವಿಂದ ಎಂಬ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಮಾನ್ವಿ ಠಾಣೆಯಲ್ಲಿ 2017ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೂಲದ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಎ3 ಆರೋಪಿ ಮುಂಚೆಯಿಂದಲೂ ತಲೆಮರೆಸಿಕೊಂಡಿದ್ದರೆ, ಉಳಿದ ಆರು ಜನರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಪಿಎಫ್‌ಐ-ಎಸ್‌ಡಿಪಿಐ ನಿಷೇಧಕ್ಕೆ ತಯಾರಿ ನಡೆದಿದೆ: ಡಾ| ಅಶ್ವತ್ಥ್ ನಾರಾಯಣ

ಇಂದು ನ್ಯಾಯಾಯಲಕ್ಕೆ ವಿಚಾರಣೆಗೆ ಕರೆ ತರಲಾಗಿತ್ತು. ವಿಚಾರಣೆ ಬಳಿಕ ಮೂತ್ರಕ್ಕೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಮಹಾರಾಷ್ಟ್ರ ಸೇರಿ ಬೇರೆ ರಾಜ್ಯಗಳಿಗೆ ತೆರಳುವ ಎಲ್ಲ ಬಸ್ ಗಳ ತಪಾಸಣೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next