Advertisement

ಕ್ರೂಸರ್ –ಪಿಕ್‌ಅಪ್ ನಡುವೆ ಭೀಕರ ಅಪಘಾತ ಓರ್ವ ಸಾವು, ಇಬ್ಬರಿಗೆ ಗಾಯ

04:22 PM Nov 04, 2020 | sudhir |

ರಾಯಚೂರು: ಸಿರವಾರ ತಾಲೂಕಿನ ಜಾಲಾಪೂರ ಹೊರವಲಯದಲ್ಲಿ ಕ್ರೂಸರ್ – ಪಿಕ್‌ ಅಪ್ ನಡುವೆ ಡಿಕ್ಕಿ ಸಂಭವಿಸಿ ಕ್ರೂಸರ್ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ಜರುಗಿದೆ.

Advertisement

ಕ್ರೂಸರ್ ನಲ್ಲಿದ್ದ ಇಬ್ಬರಲ್ಲಿ ಚಾಲಕ ನಾಗರಾಜ (28) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪಿಕ್‌ಅಪ್ ವಾಹನದ ಚಾಲಕನಿಗೂ ಗಾಯಗಳಾಗಿದ್ದು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪಿಕ್ ಅಪ್ ಗೆ ಡಿಕ್ಕಿ ದೊಡೆದ ಕ್ರೂಸರ್ ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿ ತೊಡಿಗೆ ಉರುಳಿದೆ, ಸಿರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next