Advertisement

Raichur: ಹೆದ್ದಾರಿ ಸಂಚಾರ ತಡೆದು ರೈತರ ಪ್ರತಿಭಟನೆ

02:32 PM Oct 16, 2023 | Team Udayavani |

ರಾಯಚೂರು: ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಜಮೀನುಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ತಾಲೂಕಿನ ಸಾತ್ ಮೈಲ್ ಬಳಿ ರೈತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಿಮೀಗಟ್ಟಲೇ ವಾಹನಗಳು ಸಿಕ್ಕಿಕೊಂಡು ಜನ ಪರದಾಡುವಂತಾಗಿದೆ. ಬೆಳಗ್ಗೆಯಿಂದ ರಸ್ತೆ ಮೇಲೆ ಧರಣಿ ನಡೆಸಿದ ರೈತರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಬಸ್ ಚಾಲಕರು, ವಾಹನಗಳ ಮಾಲೀಕರು ನೆಲಹಾಳ ಮಾರ್ಗವಾಗಿ ಸಂಚರಿಸಲು ಯತ್ನಿಸಿದ್ದು ಅಲ್ಲಿಯೂ ವಾಹನಗಳಿಗೆ ಅಡ್ಡಗಟ್ಟಲಾಗಿದೆ. ಟಯರ್ ಗಳಿಗೆ ಬೆಂಕಿ ಹಚ್ಚಿ ವಾಹನಗಳು ಓಡಾಡದಂತೆ ತಡೆದರು. ಬದಲಿ ಮಾರ್ಗದಿಂದ ಹೋಗಲು ಯತ್ನಿಸಿದರೂ ರೈತರು ಬಿಡಲಿಲ್ಲ.

ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ರೈತರು, ಟಿಎಲ್ ಬಿಸಿ ಕೊನೆ ಭಾಗಕ್ಕೆ ನೀರು ಬಾರದೆ ಬೆಳೆಯೆಲ್ಲ ಹಾಳಾಗುತ್ತಿದೆ. ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಲಿದ್ದು, ಇನ್ನೂ ಇದೇ ಪರಿಸ್ಥಿತಿ ಮುಂದುವರಿದರೆ ಶೋಚನೀಯವಾಗಲಿದೆ. ಕೂಡಲೇ ಕೊನೆ ಭಾಗಕ್ಕೆ ನೀರು ಹರಿಸಲು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next