Advertisement

ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಗ್ರಂಥ

06:46 PM Nov 27, 2019 | Naveen |

ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ 70ನೇ ಸಂವಿಧಾನ ಸಮರ್ಪಣಾ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಡಾ| ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಅವರ ಕೊಡುಗೆಯನ್ನು ಸ್ಮರಿಸಲಾಯಿತು.

Advertisement

ನಗರದ ಅಂಬೇಡ್ಕರ್‌ ವೃತ್ತದಲ್ಲಿನ ಡಾ| ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಮಾಲಾರ್ಪಣೆ ಮಾಡುವ ಗೌರವ ಸಲ್ಲಿಸಿದರು. ಈ ವೇಳೆ ಸಂವಿಧಾನ ಮತ್ತು ಡಾ| ಅಂಬೇಡ್ಕರ್‌ ಪರ ಘೋಷಣೆ ಕೂಗಲಾಯಿತು. ನಗರದ ಬಸವಶ್ರೀ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.

ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಎಂ.ಸಿ.ನಾಡಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಭಾರತದ ಪ್ರಜೆಯಾಗಿ ಹುಟ್ಟಿದ ಪ್ರತಿ ಮಗು ಕೂಡ ಭಾರತದ ಸಂವಿಧಾನ ಅರಿಯಬೇಕು. ಎಲ್ಲ ಧರ್ಮಗಳಿಗೆ ಒಂದೊಂದು ಗ್ರಂಥಗಳಿವೆ. ಆದರೆ, ಸಂವಿಧಾನ ಎಲ್ಲರಿಗೂ ಧರ್ಮಗ್ರಂಥ ಇದ್ದ ಹಾಗೆ. ಪ್ರತಿಯೊಬ್ಬರು ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು ಎಂದರು.

ಮೂರನೇ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾ ಧೀಶರಾದ ಈಶ್ವರ ಮಾತನಾಡಿ, ಪ್ರತಿ ಪ್ರಜೆಗೂ ಕನಿಷ್ಠ ಕಾನೂನಿನ ಅರಿವು ಇರಬೇಕು. ಕಾನೂನಿನ ತಿಳಿವಳಿಕೆ ಇದ್ದರೆ, ಅಪರಾಧಗಳ ಸಂಖ್ಯೆ ಕಡಿಮೆಯಾಗುವುದಲ್ಲದೆ ಯಾರು ನಮ್ಮನ್ನು ಮೋಸ ಮಾಡಲು ಸಾಧ್ಯವಿಲ್ಲ. ಪ್ರತಿ ಶಾಲಾ ಕಾಲೇಜುಗಳ ಹಂತದಲ್ಲಿ ಮಕ್ಕಳಲ್ಲಿ ಸಂವಿಧಾನದ ಹಾಗೂ ಕಾನೂನಿನ ಅರಿವು ಮೂಡಿಸಬೇಕು ಎಂದರು.

ಉಪನ್ಯಾಸ ನೀಡಿದ ರೇಖಾ ಪಾಟೀಲ, ವಿವೇಕಾನಂದರಂಥ ಮಹಾತ್ಮರು ಜನಿಸಿದ ಈ ನಾಡು ಇಡಿ ವಿಶ್ವಕ್ಕೆ ಮಾದರಿಯಾಗಿದೆ. ಇಂಥಲ್ಲಿ ಜನಿಸಿದ ನಾವೆಲ್ಲರೂ ಜವಾಬ್ದಾರಿ ಅರಿತು ಬಾಳಬೇಕು ಎಂದರು.

Advertisement

ಲಲಿತಾ ಎಂ. ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಡಾ| ಎಂ.ಬಸವನಗೌಡ,
ಸಿಆರ್‌ಪಿ ವೆಂಕೋಬ ಸೇರಿ ಇತರರಿದ್ದರು. ವಾಗೀಶ, ವಿದ್ಯಾಶ್ರೀ, ವಾಸವಿ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾ ಕಾರಾಗೃಹ: ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಕೇಂದ್ರದ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ನಿಮಿತ್ತ ಸಾಕ್ಷರತಾ ಕಲಿಕಾ ಕೇಂದ್ರದ ಕಾರ್ಯಕ್ರಮ ನಡೆಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು ಮಾತನಾಡಿ, ಕಲಿಕೆ ಪ್ರತಿಯೊಬ್ಬರಿಗೂ ಮುಖ್ಯ. ಅದರಿಂದ ಯಾವುದು ತಪ್ಪು, ಯಾವುದು ಸರಿ ಎಂದು ನಾವು ಮಾಡುವ ಕೆಲಸವನ್ನು ಅರ್ಥೈಸಿಕೊಳ್ಳಬಹುದು. ಪ್ರತಿ ಸಮಸ್ಯೆಗೆ
ಒಂದು ಅವಕಾಶವಿದೆ. ತಾವು ಯಾವುದೋ ಸಮಸ್ಯೆಯಿಂದ ಇಲ್ಲಿ ಬಂದಿರಬಹುದು.

ಆದರೆ, ನಿಮಗೆ ಇಲ್ಲಿ ಕಲಿಯಲು ಸಾಕಷ್ಟು ಅವಕಾಶಗಳಿವೆ. ಕಾರಣಾಂತರಗಳಿಂದ ಅಕ್ಷರ ಕಲಿಯದವರಿಗೆ ಇಲ್ಲಿ ಕಲಿಯಲು ಸದಾವಕಾಶವಿದ್ದು, ಈ ಕಾರ್ಯಕ್ರಮವನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.

ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಕೇಂದ್ರದ ಅ ಧೀಕ್ಷಕ ಬಿ.ಆರ್‌.ಅಂಧಾನಿ
ಮಾತನಾಡಿ, ಕಲಿತವರು ಹತ್ತು ಜನರ ಗುಂಪು ಮಾಡಿ ಕಲಿಯದ ಅನಕ್ಷರಸ್ಥ
ಕೈದಿಗಳನ್ನು ಅಕ್ಷರಸ್ಥರನ್ನಾಗಿ ಮಾಡುವುದೇ ನಮ್ಮ ಉದ್ದೇಶ. ಇಲ್ಲಿ ಅಕ್ಷರ ಕಲಿತು ಹೊರಗೆ ಹೋದ ಮೇಲೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿ,
ಅನಕ್ಷರತೆ ಅಂಧಕಾರವನ್ನು ತೊಲಗಿಸುವುದೇ ಶಿಕ್ಷಣದ ಮುಖ್ಯ ಉದ್ದೇಶ. ಈ ದೇಶದಲ್ಲಿ ಶಿಕ್ಷಣವು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಪ್ರತಿ ನಾಗರಿಕನು ಓದು ಬರಹ ಕಲಿಯುವ ಮೂಲಕ ಘನತೆಯಿಂದ ಜೀವನ ಸಾಗಿಸಬೇಕು ಎಂದರು.

ಜೈಲಿನಲ್ಲಿ ಬೋಧಿಸುವ ಬೋಧಕರ ಕೈಪಿಡಿ, ಕಲಿಕಾರ್ಥಿಗಳಿಗೆ ಪುಸ್ತಕಗಳು ಮತ್ತು ಕಲಿಕೆಯ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ವೇದಿಕೆ ಮೇಲಿದ್ದ ಗಣ್ಯರು ಬಿಡುಗಡೆಗೊಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವಿಕ್ಷಕಿ ಪ್ರವೀಣಾ, ವಯಸ್ಕರ ಶಿಕ್ಷಣ ಜಿಲ್ಲಾ ಕಾರ್ಯಕ್ರಮ ಸಹಾಯಕರಾದ ಯಲ್ಲಪ್ಪ ಜಾಲಿಬೆಂಚಿ, ಗಿರಿಯಪ್ಪ ದಿನ್ನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next