Advertisement

ರಾಯಚೂರು: ಹಾಡಹಗಲೇ ತಲೆಗೆ ಕಲ್ಲಿನಿಂದ ಜಜ್ಜಿ ಗುತ್ತಿಗೆದಾರನ ಬರ್ಬರ ಕೊಲೆ

07:15 PM Jul 21, 2022 | Team Udayavani |

ರಾಯಚೂರು: ನಗರದ ಟೆಲಿಫೋನ್ ಎಕ್ಸಚೇಂಜ್ ಕಚೇರಿ ಬಳಿ ಹಾಡಹಗಲೇ ಗುತ್ತಿಗೆದಾರ ಮಹಿಬೂಬ್ ಅಲಿ ಅವರ ತಲೆಗೆ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

ಡಿಡಿಪಿಐ ಕಚೇರಿ ಹಿಂಭಾಗದ ಟೆಲಿಫೋನ್ ಕಚೇರಿ ಬಳಿ ಭೀಕರ ಹತ್ಯೆ ನಡೆದಿದೆ. ಸ್ಥಳಕ್ಕೆ ರಾಯಚೂರು ಸದರ ಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next