Advertisement

Raichur: ಜೆಸಿಬಿಯಿಂದ ಮಣ್ಣು ಬಿದ್ದು ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಸ್ಥಳದಲ್ಲೇ ಮೃತ್ಯು

04:14 PM Aug 15, 2024 | Team Udayavani |

ರಾಯಚೂರು: ಖಾಲಿ ನಿವೇಶನದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಜೆಸಿಬಿಯಿಂದ ಮಣ್ಣು ಹಾಕಿದ ಕಾರಣ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Advertisement

ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ತಾಯಮ್ಮ(32) ಮೃತಪಟ್ಟಿದ್ದಾಳೆ.

ನಿವೇಶನ ಸ್ವಚ್ಛಗೊಳಿಸುತ್ತಿದ್ದಾಗ ಜೆಸಿಬಿ ಚಾಲಕನಿಂದ ಅಚಾತುರ್ಯ ನಡೆದಿದೆ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಬಡಾವಣೆ ಕೆಲ ಬಡ ಮಹಿಳೆಯರು ಇಲ್ಲಿಯೇ ಬಹಿರ್ದೆಸೆಗೆ ಹೋಗುತ್ತಿದ್ದರು. ಆ ಸ್ಥಳ ಸ್ವಚ್ಛಗೊಳಿಸಲು ಮುಂದಾಗಿದ್ದು, ಜೆಸಿಬಿ ಬಕೆಟ್ ನಿಂದ ಮಹಿಳೆ ಮೇಲೆ ಮಣ್ಣು ಹಾಕಲಾಗಿದೆ. ಮಹಿಳೆ ಕೂಗಿಕೊಂಡರು ಜೆಸಿಬಿ ಸದ್ದಿನಲ್ಲಿ ಸರಿಯಾಗಿ ಕೇಳಿಸಿಲ್ಲ ಎನ್ನಲಾಗಿದೆ. ಮೈ ಮೇಲೆ ಮಣ್ಣಿನ ರಾಶಿ ಬಿದ್ದ ಕಾರಣಕ್ಕೆ ಉಸಿರಾಡಲಾಗದೆ ಮೃತಪಟ್ಟಿದ್ದಾಳೆ.

ಮಹಿಳೆ ಸಾವಿನಿಂದ ಮೂರು ಮಕ್ಕಳು ಅನಾಥವಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಜೆಸಿಬಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Dharwad: ಇಂದಿನಿಂದ 23 ಅಸಂಘಟಿತ ವಲಯಕ್ಕೆ ಅಪಘಾತ ಪರಿಹಾರ ಸೌಲಭ್ಯ : ಸಚಿವ ಲಾಡ್

Advertisement
Advertisement

Udayavani is now on Telegram. Click here to join our channel and stay updated with the latest news.

Next