Advertisement

ಎಡವಿಬಿದ್ದ ಛಾಯಾಗ್ರಾಹಕನನ್ನು ಓಡೋಡಿ ಬಂದು ಮೇಲಕ್ಕೆತ್ತಿದ ರಾಹುಲ್‌

01:07 PM Jan 25, 2019 | Team Udayavani |

ಭುವನೇಶ್ವರ : ಇಲ್ಲಿನ ವಿಮಾನ ನಿಲ್ದಾಣದಲ್ಲಿ  ಫೋಟೋ ತೆಗೆಯುತ್ತಿದ್ದ ವೇಳೆ ಛಾಯಾಗ್ರಾಹಕರೊಬ್ಬರು ಕುಸಿದು ಬಿದ್ದಿದ್ದು , ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಓಡೋಡಿ ಬಂದು ಅವರನ್ನು ಮೇಲಕ್ಕೆತ್ತುವಲ್ಲಿ  ಸಹಕರಿಸಿ ಸರಳತೆ ತೋರಿದ್ದಾರೆ. 

Advertisement

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಟ್ವೀಟ್‌ ಮಾಡಿದ್ದು ,ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಮಾನವೀಯ ಮೌಲ್ಯಗಳನ್ನು ತೋರಿದ್ದಾರೆ.ಸರಳತೆ ಮತ್ತು ಸತ್ಯವನ್ನು ನಂಬುವ ನಾಯಕ. ಯಾವ ವ್ಯಕ್ತಿ ಕೆಳಗಿರುತ್ತಾನೆ, ಸಹಾಯಕ್ಕಾಗಿ ಬಯಸುತ್ತಾನೋ ಅವರಿಗಾಗಿ  ಮಿಡಿಯುವ  ಹೃದಯ ನಮ್ಮ ನಾಯಕನದ್ದು ಎಂದು ಬರೆದಿದ್ದಾರೆ.

ಇದಕ್ಕೆ ಕೆಪಿಸಿಸಿ ರಿ ಟ್ವೀಟ್‌ ಮಾಡಿದ್ದು, ನಿಂದನೆ, ಅವಮಾನ, ಬಿಜೆಪಿ ಮತ್ತು ಆರ್ ​ಎಸ್​ಎಸ್​ ನನಗೆ ಕೊಟ್ಟ ಬಹುದೊಡ್ಡ ಕೊಡುಗೆ. ನರೇಂದ್ರ ಮೋದಿ ಅವರು ನನ್ನನ್ನು ಎಷ್ಟೇ ನಿಂದಿಸಿದರೂ ನಾನು ಅವರನ್ನು ಅಪ್ಪಿಕೊಳ್ಳಲು ಬಯಸುತ್ತೇನೆ.ಪ್ರೀತಿಸುವುದು ನಮ್ಮ ಸಂಸ್ಕೃತಿಯೆ ಹೊರತು ದ್ವೇಷಿಸುವುದಲ್ಲ. ರಾಜಕೀಯ ವೈರುದ್ಯ, ವಿರೋಧ, ನಿಂದನೆಗಳಾಚೆಗೂ ಪ್ರೀತಿಯ ಸಾರ ಸಾರಿದ ನಾಯಕ ರಾಹುಲ್‌ ಗಾಂಧಿ, ಎಂದು ಟ್ವೀಟ್‌ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next