Advertisement

ಮಂಗಳೂರು ಖಾದ್ಯ ಬಹಳ ಇಷ್ಟ ಎಂದ ರಾಹುಲ್‌

01:12 AM Jan 17, 2021 | Team Udayavani |

ಮಂಗಳೂರು: “ಮಂಗಳೂರು ಖಾದ್ಯ ಸವಿಯಲು ನನಗಿಷ್ಟ. ಅಡುಗೆ ಮಾಡುವುದು ನನ್ನ ಹವ್ಯಾಸವಾಗಿದೆ’ ಎಂದು ಭಾರತ ಕ್ರಿಕೆಟ್‌ ತಂಡದ ಆಟಗಾರ, ಮಂಗಳೂರು ಮೂಲದ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

Advertisement

ಕಿಂಗ್ಸ್‌  ಇಲೆವೆನ್‌ ಪಂಜಾಬ್‌ ಕ್ರಿಕೆಟ್‌ ತಂಡದ ಅಧಿಕೃತ ಇನ್‌ಸ್ಟ್ರಾಗ್ರಾಮ್‌ ಪೇಜ್‌ನಲ್ಲಿ ನಟಿ ಪ್ರೀತಾ ಜಿಂಟಾ ಮತ್ತು ರಾಹುಲ್‌ ಅವರು ಲೈವ್‌ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಆಗ ರಾಹುಲ್‌, “ಲಾಕ್‌ಡೌನ್‌ ಸಮ ಯದಲ್ಲಿ ನಾನು ಕೆಲವು ಅಡುಗೆ ಮಾಡುವುದನ್ನು ಕಲಿತಿದ್ದೇನೆ. ನನ್ನ ಅಕ್ಕ ನನಗೆ ಅಡುಗೆ ಮಾಡಲು ಕಲಿಸಿದ್ದಳು’ ಎಂದರು.

ಬೀಚ್‌ ಮತ್ತು ಪರ್ವತ ಪ್ರದೇಶದಲ್ಲಿ ನಿಮಗೆ ಯಾವುದು ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ನನಗೆ ಬೀಚ್‌ ಪ್ರದೇಶ ಇಷ್ಟ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next