Advertisement

ರಫೇಲ್‌ ಪ್ರತಿಸ್ಪರ್ಧಿಗಳ ತಾಳಕ್ಕೆ ಕುಣಿಯುತ್ತಿರುವ ರಾಹುಲ್‌ : ಬಿಜೆಪಿ

05:51 AM Mar 07, 2019 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಫ್ರಾನ್ಸ್‌ ಜತೆಗೆ ಭಾರತ ಸರಕಾರ ನಡೆಸಿರುವ ರಫೇಲ್‌ ಖರೀದಿ ವ್ಯವಹಾರದ ಬಗ್ಗೆ ಪ್ರತಿಸ್ಪರ್ಧಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಆರೋಪಿಸಿದ್ದಾರೆ.

Advertisement

ರಾಹುಲ್‌ ಗಾಂಧಿ ಅವರು ಭಾರತೀಯ ಸೇನಾ ಪಡೆಯ ನೈತಿಕತೆಯನ್ನು ಕುಗ್ಗಿಸುವ ರೀತಿಯಲ್ಲಿ ಮತ್ತು ರಫೇಲ್‌ ಪ್ರತಿಸ್ಪರ್ಧಿಗಳಿಗೆ ಲಾಭವಾಗುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಈ ಖರೀದಿ ವಹಿವಾಟಿನ ಬಗ್ಗೆ  ಸುಳ್ಳುಗಳ ಸರಮಾಲೆ ಹೆಣೆದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌ ಹೇಳಿದರು. 

“ರಾಹುಲ್‌ ಗಾಂಧಿ ಅವರು ರಫೇಲ್‌ ಡೀಲ್‌ ಕುರಿತಾಗಿ ಸುಳ್ಳುಗಳ ಸರಮಾಲೆ ಪೋಣಿಸಿ ಅಪಪ್ರಚಾರ ನಡೆಸುತ್ತಿರುವುದನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ; ರಾಹುಲ್‌ ಗಾಂಧಿ ಅವರಿಗೆ ಭಾರತೀಯ ವಾಯು ಪಡೆ, ಸುಪ್ರೀಂ ಕೋರ್ಟ್‌, ಸಿಎಜಿ ಮೇಲೆ ಯಾವುದೇ ವಿಶ್ವಾಸ ಇರುವಂತೆ ಕಾಣುವುದಿಲ್ಲ. ಹಾಗಿದ್ದರೆ ಅವರು ಪಾಕಿಸ್ಥಾನವನ್ನು ನಂಬುತ್ತಾರೆಯೇ ? ಸುಳ್ಳುಗಳನ್ನೇ ಹೇಳುವ ಮೂಲಕ ರಾಹುಲ್‌ ಗಾಂಧಿ ಅವರು ರಫೇಲ್‌ ಪ್ರತಿಸ್ಪರ್ಧಿಗಳಿಗೆ ಉದ್ದೇಶಪೂರ್ವಕವಾಗಿ ಅನುಕೂಲ ಮಾಡಿಕೊಡುತ್ತಿರುವಂತೆ ಕಾಣುತ್ತಿದೆ’ ಎಂದು ಸಚಿವ ಪ್ರಸಾದ್‌ ಹೇಳಿದರು.     

Advertisement

Udayavani is now on Telegram. Click here to join our channel and stay updated with the latest news.

Next