Advertisement

ಕಮಲ್‌ ನಾಥ್‌ ಆಪ್ತರ ಮೇಲಿನ ಐಟಿ ದಾಳಿಗೆ ರಾಹುಲ್‌ ಮೌನ ಏಕೆ : ಇರಾನಿ

09:58 AM Apr 12, 2019 | Sathish malya |

ಅಮೇಠಿ : ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಅವರ ಆಪ್ತರ ಮೇಲೆ ನಡೆದಿರುವ ಐಟಿ ದಾಳಿ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೌನವಹಿಸಿರುವುದನ್ನು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಪ್ರಶ್ನಿಸಿದ್ದಾರೆ.

Advertisement

ಸಿಎಂ ಕಮಲ್‌ ನಾಥ್‌ ಅವರ ನಿಕಟವರ್ತಿಗಳ ಮೇಲಿನ ಐಟಿ ದಾಳಿಯಲ್ಲಿ ಅಧಿಕಾರಿಗಳು ಸುಮಾರು 281 ಕೋಟಿ ರೂ. ಕಪ್ಪುಹಣದ ವ್ಯಾಪಕ ಮತ್ತು ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರು ವಹಿಸಿರುವ ಜಾಣ ಮೌನ ಪ್ರಶ್ನಾರ್ಹವಾಗಿದೆ ಎಂದು ಇರಾನಿ ಹೇಳಿದರು.

ಇದೇ ವೇಳೆ ಐಟಿ ಅಧಿಕಾರಿಗಳು ದಿಲ್ಲಿಯ ತುಘಲಕ್‌ ರಸ್ತೆಯ ಪ್ರಮುಖ ವ್ಯಕ್ತಿಯೊಬ್ಬರ ನಿವಾಸದಿಂದ ಮುಖ್ಯ ರಾಜಕೀಯ ಪಕ್ಷವೊಂದರ ಪ್ರಧಾನ ಕಾರ್ಯಾಲಯಕ್ಕೆ 20 ಕೋಟಿ ರೂ. ವರ್ಗಾವಣೆ ಆಗಿರುವುದರ ಜಾಡನ್ನು ಕೂಡ ಪತ್ತೆ ಹಚ್ಚಿದ್ದಾರೆ. ವಿಷಯ ಇಂತಿರುವಾಗ ಆ 20 ಕೋಟಿ ರೂ.ಗಳನ್ನು ತುಘಲಕ್‌ ರಸ್ತೆ ನಿವಾಸಕ್ಕೆ ವರ್ಗಾಯಿಸಿರುವ ಮಧ್ಯ ಪ್ರದೇಶದ ಸಭ್ಯ ವ್ಯಕ್ತಿ ಯಾರೆಂಬುದನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಇರಾನಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next