Advertisement

ದೇಶದ್ರೋಹ ಕೇಸು: ರಾಹುಲ್‌ ಗಾಂಧಿ ಕಿಡಿ

10:14 AM Nov 21, 2019 | Team Udayavani |

ನವದೆಹಲಿ: 2017ರಿಂದ 2018ರ ಒಳಗೆ ಜಾರ್ಖಂಡ್‌ನ‌ ಒಂದೇ ಜಿಲ್ಲೆಯ 11,000 ಜನರ ವಿರುದ್ಧ ದೇಶದ್ರೋಹ ಕೇಸು ದಾಖಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪತ್ರಿಕೆಯ ವರದಿಯೊಂದನ್ನು ಉಲ್ಲೇಖೀಸಿ ಆರೋಪಿಸಿದ್ದಾರೆ. ಇದು ದೇಶದ ಪ್ರಜ್ಞೆಯನ್ನು ಕೆಣಕುವ ವಿಷಯ ಎಂದಿದ್ದಾರೆ.

Advertisement

ಪತ್ರಿಕೆ ವರದಿ ಪ್ರಕಾರ, ಖುಂಟಿ ಜಿಲ್ಲೆಯಲ್ಲಿ ಪತಲ್ಗಡಿ ಎಂಬ ಹೆಸರಿನಲ್ಲಿ ಆದಿವಾಸಿ ಚಳುವಳಿ ನಡೆವ ವೇಳೆ ಚಳವಳಿಯನ್ನು ಹತ್ತಿಕ್ಕಿದ ಪೊಲೀಸರು ಸುಮಾರು 11,000 ಜನರ ವಿರುದ್ಧ ಸಾರ್ವಜನಿಕ ಜೀವನಕ್ಕೆ ಧಕ್ಕೆ ತಂದಿರುವ ಆರೋಪದ ಮೇಲೆ ದೇಶದ್ರೋಹದ ಕೇಸು ಹಾಕಿದ್ದಾರೆ. ಇದು ದೇಶದಲ್ಲಿ ಏಕಕಾಲಕ್ಕೆ ಅತಿ ಹೆಚ್ಚು ಜನರ ವಿರುದ್ಧ ಹಾಕಲಾಗಿರುವ ದೇಶದ್ರೋಹದ ಮೊಕದ್ದಮೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next