Advertisement

ಮಾಮಾಜಿ ಪುತ್ರ ಪನಾಮಾ ಹಗರಣದಲ್ಲಿ; ಆದರೂ ಏನೂ ಆಗಿಲ್ಲ: ರಾಹುಲ್‌

10:30 AM Oct 30, 2018 | udayavani editorial |

ಜಬುವಾ, ಮಧ್ಯ ಪ್ರದೇಶ : ಮಧ್ಯ ಪ್ರದೇಶ ಮುಖ್ಯ ಮಂತ್ರಿ, ಮಾಮಾಜಿ,  ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸರಕಾರ ಕಂಠಪೂರ್ತಿ ಭ್ರಷ್ಟಾಚಾರದಲ್ಲಿ ಮುಳುದೆ;  ಮಾಮಜಿ ಪುತ್ರನ ಹೆಸರು ಪನಾಮಾ ಪೇಪರ್‌ ಹಗರಣದಲ್ಲಿ ಕೇಳಿ ಬಂದಿದೆ; ಹಾಗಿದ್ದರೂ ಅವರಿಗೆ ಈ ತನಕ  ಏನೂ ಆಗಿಲ್ಲ; ಯಾವ ಬಾಧೆಯೂ ತಟ್ಟಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಮಧ್ಯಪ್ರದೇಶದ ಮಾಲ್ವಾ ಪ್ರಾಂತ್ಯದಲ್ಲಿ ಎರಡು ದಿನಗಳ ಮಿಂಚಿನ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. 

“ಅಲ್ಲಿ ಚೌಕೀದಾರ್‌, ಇಲ್ಲಿ ಮಾಮಾಜಿ; ಈ ಮಾಮಾಜಿಯ ಪುತ್ರನ ಹೆಸರು ಪನಾಮಾ ಪೇಪರ್‌ ಹಗರಣದಲ್ಲಿ ಕೇಳಿ ಬಂದಿದೆ. ಪಾಕಿಸ್ಥಾನದಲ್ಲಿ  ಅಲ್ಲಿನ ಪ್ರಧಾನಿ ನವಾಜ್‌ ಷರೀಫ್ ಅವರ ಹೆಸರು ಪನಾಮಾ ಹಗರಣದಲ್ಲಿ ಕೇಳಿ ಬಂದಾಕ್ಷಣ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು; ಅವರನ್ನು ಜೈಲಿಗೆ ಹಾಕಲಾಯಿತು; ಭಾರತದಲ್ಲಾದರೆ ಏನೂ ಆಗಲ್ಲ’ ಎಂದು ರಾಹುಲ್‌ ಗಾಂಧಿ ಕಟಕಿಯಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next