Advertisement

Rahul Gandhi ಆಕಸ್ಮಿಕ ಹಿಂದೂ: ಸಿಎಂ ಯೋಗಿ ಆದಿತ್ಯನಾಥ್‌

01:27 AM Oct 01, 2024 | Team Udayavani |

ಚಂಡೀಗಢ: ಆಕಸ್ಮಿಕ ಹಿಂದೂಗಳಿಂದ ದೇಶಕ್ಕೆ ನಿಷ್ಠೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಿಯಾಣ ಪ್ರಚಾರ­ದಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮ­ಮಂದಿರ ದಿಂದ ದೇಶವೇ ಸಂಭ್ರಮಿಸು­ತ್ತಿದೆ. ಆದರೆ ಕಾಂಗ್ರೆಸ್‌ನ “ಆಕಸ್ಮಿಕ ಹಿಂದೂ’ಗಳಿಗೆ ಇದನ್ನೂ ಸಹಿಸಲಾಗುತ್ತಿಲ್ಲ. ಇದೇ ರಾಮನ ಸಂಸ್ಕೃತಿಗೂ ರೋಮ್‌ ಸಂಸ್ಕೃತಿಗೂ ಇರುವ ವ್ಯತ್ಯಾಸ ಎಂದರು. ರಾಹುಲ್‌ ಗಾಂಧಿ ರಾಮ ಮಂದಿ ಉದ್ಘಾಟನೆಯನ್ನು “ನಾಚ್‌ ಗಾನಾ’ ಕಾರ್ಯ­ಕ್ರಮ ಎಂದು ಟೀಕಿಸಿದ್ದಕ್ಕೆ ತಿರುಗೇಟು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next