Advertisement

ಅನುಮತಿ ಇಲ್ಲದಿದ್ದರೂ ಹಿಂಸಾತ್ರಸ್ತ ಸಹರನ್‌ಪುರಕ್ಕೆ ಹೊರಟ ರಾಹುಲ್‌

11:52 AM May 27, 2017 | udayavani editorial |

ಹೊಸದಿಲ್ಲಿ : ಜಾತಿ ಸಂಘರ್ಷಕ್ಕೆ ಇಬ್ಬರು ಬಲಿಯಾಗಿ ಹಲವಾರು ಮಂದಿ ಗಾಯಗೊಂಡ ಉತ್ತರಪ್ರದೇಶದ ಉದ್ವಿಗ್ನ, ಹಿಂಸಾತ್ರಸ್ತ ಸಹರಣಪುರಕ್ಕೆ ಭೇಟಿ ನೀಡುವುದಕ್ಕೆ ಉತ್ತರ ಪ್ರದೇಶ ಸರಕಾರ ಅನುಮತಿ ನಿರಾಕರಿಸಿರುವ ಹೊರತಾಗಿಯೂ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಲ್ಲಿಗೆ ಹೋಗಲು  ಸಜ್ಜಾಗಿದ್ದಾರೆ. 

Advertisement

ರಾಹುಲ್‌ ಗಾಂಧಿ ಜತೆಗೆ ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ರಾಜ್‌ ಬಬ್ಬರ್‌ ಹಾಗೂ ಕಾಂಗ್ರೆಸ್‌ ನಾಯಕ ಗುಲಾಂ ನಬೀ ಆಜಾದ್‌  ಕೂಡ ಹೋಗಲಿದ್ದಾರೆ. 

ಹಿಂಸಾಗ್ರಸ್ತ ಸಹರಣಪುರಕ್ಕೆ ಯಾವುದೇ ರಾಜಕಾರಣಿಯ ಭೇಟಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ರಾಹುಲ್‌ ಗಾಂಧಿಯ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿದೆ. ಹಾಗಾಗಿ ರಾಹುಲ್‌ ಗಾಂಧಿ ರಸ್ತೆ ಮೂಲಕ ಪ್ರಯಾಣಿಸಿ ಸಹರಣಪುರಕ್ಕೆ ಹೋಗಲಿದ್ದಾರೆ ಎಂದು  ಕಾಂಗ್ರೆಸ್‌ ಮೂಲಗಳು ಹೇಳಿವೆ. 

ರಾಹುಲ್‌ ಗಾಂಧಿ ಸಹರಣಪುರಕ್ಕೆ ಭೇಟಿ ನೀಡುವುದನ್ನು ತಡೆಯಲು ಆದಿತ್ಯನಾಥ್‌ ಯಾರೂ ಅಲ್ಲ ಎಂದು ಮೊನ್ನೆ ಗುರುವಾರವೇ ಕಾಂಗ್ರೆಸ್‌ ಪಕ್ಷ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next