Advertisement

ಜ್ಞಾನಿಯೂ ಅಲ್ಲದ ತ್ಯಾಗಿಯೂ ಅಲ್ಲದ ರಾಹುಲ್‌ ಬ್ರಾಹ್ಮಣ ಹೇಗಾಗುತ್ತಾರೆ?

06:41 AM Jan 05, 2019 | |

ಹೊಸದಿಲ್ಲಿ: ಜ್ಞಾನಿಯೂ ಅಲ್ಲದ ತ್ಯಾಗಿಯೂ ಅಲ್ಲದ ರಾಹುಲ್‌ ಗಾಂಧಿ ಬ್ರಾಹ್ಮಣ ಹೇಗಾಗುತ್ತಾರೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಪ್ರಶ್ನಿಸಿದ್ದಾರೆ.

Advertisement

ಎಎನ್‌ಐನೊಂದಿಗೆ ಮಾತನಾಡಿದ ಸ್ವಾಮಿ ಬ್ರಾಹ್ಮಣನಾದವನಿಗೆ ಉಪನಯನ ಆಗಿರಬೇಕಾಗುತ್ತದೆ.ಆಗ ಮಾತ್ರ ದ್ವಿಜ ಎನಿಸಿಕೊಳ್ಳುತ್ತಾನೆ. ಬ್ರಾಹ್ಮಣ ಏಕಾಏಕಿ ಆಗಲು ಸಾಧ್ಯವಿಲ್ಲ. ಬ್ರಾಹ್ಮಣನಾದವನು ಜ್ಞಾನಿಯೂ , ತ್ಯಾಗಿಯೂ ಆಗಿರಬೇಕಾಗುತ್ತದೆ. ರಾಹುಲ್‌ ಜ್ಞಾನಿ ಅಲ್ಲ, ತ್ಯಾಗಿಯೂ ಅಲ್ಲ ಇನ್ನು ಬ್ರಾಹ್ಮಣ ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದರು. 

ರಾಹುಲ್‌ ಗಾಂಧಿ ಅವರು ನಾನು ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ದೇವಾಲಯದಲ್ಲಿ ಸಂಕಲ್ಪ ಪೂಜೆ ವೇಳೆ ಹೇಳಿಕೊಂಡ ಬಳಿಕ ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next