Advertisement

ರಾಹುಲ್‌ ಡೈರಿ ದಾಳಿ : ರಾಜ್ಯದಲ್ಲಿ ಮೈತ್ರಿ ಜಂಟಿ ಪ್ರಚಾರ ಆರಂಭ

01:26 PM Apr 01, 2019 | Team Udayavani |

ಬೆಂಗಳೂರು: ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ ಯಡಿಯೂರಪ್ಪ ಅವರು ಬಿಜೆಪಿ ವರಿಷ್ಠರಿಗೆ ನೀಡಿದ್ದ 1,800 ಕೋಟಿ ರೂ. ಯಾರ ದುಡ್ಡು ಎಂಬುದಕ್ಕೆ ಜನರಿಗೆ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದರು.

Advertisement

ಬೆಂಗಳೂರಿನ ಹೊರವಲಯ ಮಾದಾವರದಲ್ಲಿ ರವಿವಾರ ರಾಜ್ಯದಲ್ಲಿ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅದ್ಧೂರಿ ಪ್ರಚಾರ ಉದ್ಘಾಟಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಅವರು ಈ ಸವಾಲು ಹಾಕಿದರು. ಜತೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನ ತಿದ್ದುಪಡಿ ಮಾಡುವ ಕೂಗು ಕೇಳಿಬರುತ್ತಿದೆ. ಹೀಗಾಗಿ ದೇಶದ ಜನರೆಲ್ಲ ಒಂದಾಗಿ ಬಿಜೆಪಿ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಮೋದಿ ಮತ್ತು ಬಿಜೆಪಿಯ ಭ್ರಮಾಲೋಕದ ಮಾತಿಗೆ ಬೆಲೆ ಕೊಡದೆ ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ರಾಹುಲ್‌ ಜತೆಗೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಮೈತ್ರಿ ಪಕ್ಷದ ಪ್ರಮುಖರು ದನಿಗೂಡಿಸಿದ್ದು, ಒಗ್ಗಟ್ಟಿನಿಂದ ಶ್ರಮಿಸುವಂತೆ ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ರಾಹುಲ್‌ ಗಾಂಧಿ ಮಾತನಾಡಿ, “ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ, ಜನ ಸಾಮಾನ್ಯರ ಹಣ ಪೋಲಾಗಲು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಿರುತ್ತಾರೆ. ಆದರೆ ಬಿ.ಎಸ್‌.ಯಡಿಯೂರಪ್ಪ ಅವರ ಡೈರಿಯಲ್ಲಿ ನಮೂದಿಸಿರುವ 1,800 ಕೋಟಿ ರೂ. ಹಣ ಎಲ್ಲಿಂದ ಬಂತು? ರಾಜ್ಯದಿಂದ ನಿತಿನ್‌ ಗಡ್ಕರಿ, ರಾಜನಾಥ ಸಿಂಗ್‌, ಅರುಣ್‌ ಜೇಟಿÉಗೆ ಹಣ ನೀಡಿದ್ದಾರೆ. ಆ ದುಡ್ಡು ಯಾರದ್ದು ಎಂದು ಮೋದಿ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು.

ಉದ್ಯಮಿಗಳ ಪರ
ಕೇಂದ್ರ ಸರಕಾರವು 15ರಿಂದ 20 ಉದ್ಯಮಿಗಳ ಪರವಾಗಿದೆ. ಅವರ 3.50 ಲಕ್ಷ ಕೋಟಿ ರೂ. ಸಾಲ ಮಾಫಿ ಮಾಡಿದೆ. ಆದರೆ ದೇಶದ ಕೃಷಿಕರ ಸಾಲ ಮನ್ನಾಕ್ಕೆ ದುಡ್ಡಿಲ್ಲ ಎನ್ನುತ್ತಾರೆ. ಉದ್ಯಮಿಗಳಿಗೆ ನೀಡಲು ದುಡ್ಡಿರುತ್ತದೆ, ರಫೆಲ್‌ ಡೀಲ್‌ ಮೂಲಕ ಅನಿಲ್‌ ಅಂಬಾನಿಗೆ 36 ಸಾವಿರ ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.

Advertisement

ಮೋದಿ ವಿರುದ್ಧ ರಾಹುಲ್‌, ದೇವೇಗೌಡ ವಾಗ್ಧಾಳಿ

ಕೇಂದ್ರದಲ್ಲಿ ಮೋದಿ ಸರಕಾರ ತೊಲಗಿಸಲು ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಎರಡೂ ಪಕ್ಷಗಳ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಬೇಕು. ಜೆಡಿಎಸ್‌ನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್‌ನ ಕಾರ್ಯ ಕರ್ತರು, ಮುಖಂಡರು ಕೆಲಸ ಮಾಡಬೇಕು. ಹಾಗೆಯೇ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು. ಎರಡೂ ಪಕ್ಷಗಳ ಗುರಿ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಸೋಲಿಸುವುದೇ ಆಗಿದೆಎಂದು ರಾಹುಲ್‌ ಗಾಂಧಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ನಡೆಸುತ್ತಿದ್ದಂತೆ ದಿಲ್ಲಿಯಲ್ಲೂ ಮೈತ್ರಿ ಸರಕಾರ ರಚನೆ ಮಾಡಲಿದ್ದೇವೆ. ಐದು ವರ್ಷ ಬಿಜೆಪಿ ಏನು ಮಾಡಿಲ್ಲ. ಎಂದು ಟೀಕಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಾತನಾಡಿ, ದೇಶಕ್ಕೆ ಜಾತ್ಯತೀತ ಶಕ್ತಿಗಳ ಒಗ್ಗಟ್ಟಿನ ಸಂದೇಶ ರವಾನಿಸಲು ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆರ್‌ಎಸ್‌ಎಸ್‌ನವರು ಹಿಂದೂ ರಾಷ್ಟ್ರ ಮಾಡಲು ಹೊರಟಿ¨ªಾರೆ. ಆದರೆ ಇದು ಹಿಂದೂ ರಾಷ್ಟ್ರವಲ್ಲ. ಜಾತ್ಯತೀತ ರಾಷ್ಟ್ರ ಎನ್ನುವುದನ್ನು ಸಾಬೀತು ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ 2018ರ ಮೇ 23ಕ್ಕೆ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ಇಡಿ ದೇಶಕ್ಕೆ ಒಂದು ಸಂದೇಶ ರವಾನೆ ಮಾಡಿದ್ದೇವು. ಈಗ ಅದೇ ಸಂದೇಶ ರವಾನೆ ಮಾಡಲು ಜಂಟಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next