Advertisement

ಬಿಜೆಪಿ ವಿರುದ್ಧ ರಾಹುಲ್‌, ಪ್ರಿಯಾಂಕಾ ಆಕ್ರೋಶ

11:53 PM Apr 11, 2023 | Team Udayavani |

ವಯನಾಡ್‌: “ಸಂಸದ ಸ್ಥಾನ’ ಎನ್ನುವುದು ಕೇವಲ ಒಂದು “ಟ್ಯಾಗ್‌’ ಅಷ್ಟೆ. ಅದನ್ನು ಬಿಜೆಪಿ ನನ್ನಿಂದ ಕಿತ್ತುಕೊಳ್ಳಬಹುದು, ನನ್ನ ಹುದ್ದೆಯನ್ನು, ಮನೆಯನ್ನು ಕಿತ್ತುಕೊಳ್ಳಬಹುದು, ನನ್ನನ್ನು ಜೈಲಿಗೂ ಹಾಕಬಹುದು. ಆದರೆ ವಯನಾಡ್‌ ಜನರನ್ನು ಪ್ರತಿನಿಧಿಸುವುದರಿಂದ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಲೋಕಸಭಾ ಸದಸ್ಯತ್ವದಿಂದ ಅನರ್ಹ ಗೊಂಡ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರವಾದ ಕೇರಳದ ವಯನಾಡ್‌ಗೆ ಮಂಗಳವಾರ ಭೇಟಿ ನೀಡಿದ ರಾಹುಲ್‌, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸಹೋದರಿ ಪ್ರಿಯಾಂಕಾ ವಾದ್ರಾರೊಂದಿಗೆ “ಸತ್ಯಮೇವ ಜಯತೇ’ ರೋಡ್‌ ಶೋ ಕೂಡ ನಡೆಸಿದ ಅವರು “ನನಗೆ ಆಶ್ಚರ್ಯವಾಗುವುದೇನೆಂದರೆ ಇಷ್ಟು ವರ್ಷಗಳಾದರೂ ಬಿಜೆಪಿ ತನ್ನ ಪ್ರತಿ ಸ್ಪರ್ಧಿಯ ಬಗ್ಗೆ ಅರ್ಥಮಾಡಿ ಕೊಂಡಿಲ್ಲ. ನನ್ನ ಮನೆಗೆ ಪೊಲೀಸರನ್ನು ಕಳುಹಿಸಿ ದೊಡನೆ, ಮನೆ ಖಾಲಿ ಮಾಡಿಸಿದೊಡನೆ ನಾನು ಹೆದರುತ್ತೇನೆ ಎಂದು ಅವರು ಭಾವಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, “ನನ್ನ ಸಹೋದರ ಸರಕಾರವನ್ನು ಪ್ರಶ್ನಿಸುತ್ತಿ ದ್ದಾನೆ ಎಂಬ ಏಕೈಕ ಕಾರಣಕ್ಕೆ ಇಡೀ ಬಿಜೆ ಪಿಯೇ ಆತನ ವಿರುದ್ಧ ಅಸಹನೀಯ ವಾಗಿ ಮುಗಿಬೀಳುತ್ತಿದೆ. ಅವರನ್ನು ಅಪ ಹಾಸ್ಯ ಮಾಡುವುದು ಸರಿ ಎಂಬಂತೆ ಪ್ರಧಾನಿ ಮೋದಿಯವರೂ ನಡೆದು ಕೊ ಳ್ಳು ತ್ತಿದ್ದಾರೆ. ಆದರೆ ರಾಹುಲ್‌ ಧ್ವನಿ ಯನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next