Advertisement

ನಾಳೆಯಿಂದ ರಾಹುಲ್‌ ದ್ರಾವಿಡ್ ಎನ್‌ಸಿಎ ಮುಖ್ಯಸ್ಥ

11:24 AM Jun 30, 2019 | keerthan |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ.

Advertisement

ಜು.1ರಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರ ಪರಿಣಾಮ ಅವರು ಭಾರತ ಎ ಹಾಗೂ ಕಿರಿಯರ ತಂಡದ ತರಬೇತುದಾರನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ನಿಯಮವಿರುವುದರಿಂದ ಈ ಸ್ಥಿತಿ ಎದುರಾಗಿದೆ.

ಇವರ ಗೈರಿನಲ್ಲಿ ಪರಾಸ್‌ ಮ್ಹಾಂಬ್ರೆ ಮತ್ತು ಅಭಯ್‌ ಶರ್ಮ ಭಾರತ ಎ ಹಾಗೂ ಕಿರಿಯರ ತಂಡದ ಹೊಣೆಗಾರಿಕೆ ಹೊರಲಿದ್ದಾರೆ. ದ್ರಾವಿಡ್‌ ಇನ್ನು ಮುಂದೆ ಭಾರತ ಕ್ರಿಕೆಟ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಭವಿಷ್ಯದ ಪೀಳಿಗೆಯನ್ನು ರೂಪಿಸುವುದು, ಎನ್‌ಸಿಎ ಹಾಗೂ ವಲಯವಾರು ಕ್ರಿಕೆಟ್‌ ಅಕಾಡೆಮಿಗಳ ತರಬೇತುದಾರರನ್ನು ನೇಮಿಸುವುದು, ಮಹಿಳಾ ತಂಡದ ಅಭಿವೃದ್ಧಿಗೆ ಶ್ರಮಿಸುವುದು, ಗಾಯಗೊಂಡ ಕ್ರಿಕೆಟಿಗರ ಯೋಗಕ್ಷೇಮ ಗಮನಿಸುವುದು ದ್ರಾವಿಡ್‌ ಪಾಲಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next