Advertisement

ನಗದು ನೀಡಿಕೆಯಲ್ಲಿ  ತಾರತಮ್ಯ: ದ್ರಾವಿಡ್‌ ಅಸಮಾಧಾನ?

07:50 AM Feb 07, 2018 | Team Udayavani |

ಮುಂಬಯಿ: ಭಾರತ ಕಿರಿಯರ ತಂಡ ವಿಶ್ವಕಪ್‌ ಗೆದ್ದು ಬೀಗಿದೆ. ದೇಶದೆಲ್ಲೆಡೆ ಹುಡುಗರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಆಟಗಾರರಿಗೆ ಹಣದ ಮಳೆಯೇ ಸುರಿಯುತ್ತಿದೆ.

Advertisement

ಅಂಡರ್‌ 19 ಕೋಚ್‌ ದ್ರಾವಿಡ್‌ಗೆಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) 50 ಲಕ್ಷ ರೂ. ನೀಡಿದೆ. ಆಟಗಾರರಿಗೆ 30 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗಳಿಗೆ 20 ಲಕ್ಷ ರೂ. ನೀಡಲಾಗಿದೆ. ಆದರೆ ಬಿಸಿಸಿಐಯ ಈ ನಿರ್ಧಾರದಿಂದ ದ್ರಾವಿಡ್‌ಗೆ ಒಳಗೊಳಗೆಯೆ ಮುಜುಗರ-ಬೇಸರವಾಗಿದೆಯೆ? ಹೀಗೊಂದು ವರದಿಯನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದೆ. ದ್ರಾವಿಡ್‌ಗೆ ಅಸಮಾಧಾನ ಆಗಿದೆ ಎಂದು ವರದಿ ಮಾಡಿದೆ.

ಅಸಮಾಧಾನವೇಕೆ? ದ್ರಾವಿಡ್‌ ಅಸಮಾಧಾನಕ್ಕೆ ಕಾರಣ ತನಗೆ ಮಾತ್ರ 50 ಲಕ್ಷ ರೂ. ನೀಡಿ ಸಹಾಯಕ ಸಿಬಂದಿಗೆ 20 ಲಕ್ಷ ರೂ. ಪ್ರಕಟಿಸಿರುವುದು ಎನ್ನಲಾಗಿದೆ. ತಮ್ಮಂತೆ ತಂಡದ ಗೆಲುವಿಗೆ ಸಹಾಯಕ ಸಿಬಂದಿಗಳ ಪಾತ್ರವೂ ಇದೆ. ಆದರೆ ಅವರಿಗೆ ಕಡಿಮೆ ನಗದು ಬಹುಮಾನ ಪ್ರಕಟಿಸಿರುವುದು ದ್ರಾವಿಡ್‌ ಬೇಸರಕ್ಕೆ ಕಾರಣ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next