Advertisement

ಸಂವಿಧಾನದ ಹೆಸರಿನಲ್ಲಿ ರಾಹುಲ್‌ ಆಸ್ಕರ್‌ನಂಥ ನಟನೆ: ಕೆಟಿಆರ್‌ ವ್ಯಂಗ್ಯ

09:28 PM Jul 09, 2024 | Team Udayavani |

ನವದೆಹಲಿ: ಲೋಕಸಭೆ ವಿಪಕ್ಷನಾಯಕ ರಾಹುಲ್‌ ಗಾಂಧಿ ಅವರು ಸಂವಿಧಾನ ರಕ್ಷಿಸುವ ಹೆಸರಿನಲ್ಲಿ ಆಸ್ಕರ್‌ ಪ್ರಶಸ್ತಿ ಬರುವಂಥ ನಟನೆ ಮಾಡುತ್ತಿದ್ದಾರೆ ಎಂದು ಬಿಆರ್‌ಎಸ್‌ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮ್‌ ರಾವ್‌ ವ್ಯಂಗ್ಯವಾಡಿದ್ದಾರೆ.

Advertisement

ಬಿಆರ್‌ಎಸ್‌ನ 6 ಎಂಎಲ್‌ಸಿಗಳು ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಬೆನ್ನಲ್ಲೇ ಕೆಟಿಆರ್‌ ಈ ರೀತಿ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಪಕ್ಷ ತೊರೆದವರ ವಿರುದ್ಧ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸುವುದಾಗಿಯೂ ಹೇಳಿದ್ದಾರೆ.

ಜತೆಗೆ “ಒಂದೆಡೆ ರಾಹುಲ್‌ ಗಾಂಧಿ ಸಂವಿಧಾನ ಪ್ರತಿಯನ್ನು ಪ್ರದರ್ಶಿಸುತ್ತಾ ಅದನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಮತ್ತೂಂದೆಡೆ ಅವರ ಪಕ್ಷ ಅದೇ ಸಂವಿಧಾನವನ್ನು ಅವಮಾನಿಸುತ್ತಿದೆ. ಸಂವಿಧಾನದ ರಕ್ಷಣೆ ಹೆಸರಿನಲ್ಲಿ ರಾಹುಲ್‌ ಆಸ್ಕರ್‌ ಪ್ರಶಸ್ತಿ ಕೊಡುವಂತೆ ನಟನೆ ಮಾಡುತ್ತಿದ್ದಾರೆ. ಅವರ ಭರವಸೆಗಳು ಮೊಲಗಳ ಜತೆ ರೇಸಿಗಿಳಿದಂತೆ, ನಾಯಿಗಳನ್ನ ಬೇಟೆಗೆ ಕರೆದೊಯ್ದಂತೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next