Advertisement

ಮುಗಿಯಿತು ರಾಹುಕಾಲ, ಗುಳಿಗಕಾಲ!

01:40 PM Mar 28, 2019 | Naveen |
ಈ ಹಿಂದೆ ತೆರೆ ಕಂಡು ಸುದ್ದಿ ಮಾಡಿದ್ದ ಪತ್ತೀಸ್‌ ಗ್ಯಾಂಗ್‌ ಸಿನೆಮಾ ತಂಡದ ಮತ್ತೊಂದು  ಸಿನೆಮಾ ‘ರಾಹುಕಾಲ ಗುಳಿಗಕಾಲ’ ಚಿತ್ರೀಕರಣ ಮುಗಿಸಿ ಈಗ ಡಬ್ಬಿಂಗ್‌ ಕೂಡ ಮುಗಿಸಿದೆ. ಸೂರಜ್‌ ಬೋಳಾರ್‌ ನಿರ್ದೇಶನವಿರುವ ಈ ಸಿನೆಮಾವನ್ನು ಪ್ರೀತಂ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್‌ ಕುಮಾರ್‌ ಪ್ರಸ್ತುತಿಯಲ್ಲಿ ಸಿನೆಮಾ
ಮೂಡಿ ಬರಲಿದ್ದು, ನಾಯಕನಾಗಿ ಅರ್ಜುನ್‌ ಕಾಪಿಕಾಡ್‌ ಮತ್ತು ನಾಯಕಿಯಾಗಿ ನವ್ಯತಾ ರೈ ಅವರು ನಟಿಸಲಿದ್ದಾರೆ.
ಇದೊಂದು ನಿಜ ಜೀವನಕ್ಕೆ ಹತ್ತಿರವಿರುವ ಸಿನೆಮಾ. ನಿಜ ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಕೇಂದ್ರೀಕರಿಸಿಕೊಂಡೇ ಈ ಸಿನೆಮಾದ ಕಥೆ ಬರೆಯಲಾಗಿದೆ. ಅದ್ದರಿಂದ ಇದು ನೈಜತೆಯನ್ನು ಉಳಿಸಿಕೊಂಡಿರುವ ಸಿನೆಮಾ ಎಂದೇ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಮಣಿಕಾಂತ್‌ ಕದ್ರಿ ಅವರ ಸಂಗೀತ, ಮಾಸ್‌ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್‌,
ಚಂದ್ರಹಾಸ ಉಳ್ಳಾಲ, ವಿಸ್ಮಯ ವಿನಾಯಕ್‌ ನಟಿಸುತ್ತಿದ್ದು, ಪ್ರತಿಭಾನ್ವಿತ ಹೊಸ ಕಲಾವಿದರು ಕೂಡ ತಮ್ಮ ಅಭಿನಯ ಕೌಶಲವನ್ನು ತೋರಿಸಿದ್ದಾರೆ. ಕೆಮರಾದಲ್ಲಿ ಸಿದ್ದು ಜಿ.ಎಸ್‌., ಸುರೇಶ್‌ ಅವರ ಸಂಕಲನದಲ್ಲಿ ಚಿತ್ರವು ತೆರೆ ಗೇರಲು ಸಿದ್ಧತೆ ನಡೆಸುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next