Advertisement

ನಿರ್ಮಲಾಗೆ ರಘುರಾಮ್‌ ರಾಜನ್‌ ತಿರುಗೇಟು

09:57 AM Nov 01, 2019 | Team Udayavani |

ಹೊಸದಿಲ್ಲಿ: ಅರ್ಥಶಾಸ್ತ್ರಜ್ಞ ರಘುರಾಮ್‌ ರಾಜನ್‌ ಅವರು, ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಆಗಿದ್ದ ಅವಧಿಯಲ್ಲೇ ಭಾರತದ ಆರ್ಥಿಕತೆ ಕುಸಿದಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿರುವ ಆರೋಪಕ್ಕೆ ರಾಜನ್‌ ತಿರುಗೇಟು ನೀಡಿದ್ದಾರೆ.

Advertisement

ಆರ್‌ಬಿಐನಲ್ಲಿ ತಮ್ಮ ಆಡಳಿತದ ಮೂರನೇ ಎರಡರಷ್ಟು ಭಾಗ, ಬಿಜೆಪಿ ಸರಕಾರದ ಅಧೀನದಲ್ಲೇ ಇದ್ದಿದ್ದಾಗಿ ಅವರು ಹೇಳಿದ್ದಾರೆ. ‘ಭಾರತದಲ್ಲಿ ಹೊಸ ಸುಧಾರಣೆಗಳ ಕ್ರಾಂತಿಯಾಗಬೇಕು. ಇಲ್ಲವಾದರೆ, ಶೇ.5ರಷ್ಟು ಜಿಡಿಪಿಯೊಂದಿಗೆ ತೆವಳುತ್ತಿರುವ ಭಾರತದ ಆರ್ಥಿಕತೆ ಎಂದಿಗೂ ಮೇಲೆ ಬರಲು ಸಾಧ್ಯವಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next