Advertisement

ಮೊಬೈಲ್‌ ಮಾಯೆಯ ದ್ವಾರ: ರಾಘವೇಶ್ವರ ಶ್ರೀ ಕಳವಳ

09:10 AM Dec 17, 2018 | Team Udayavani |

ಬೆಂಗಳೂರು: ಮೊಬೈಲ್‌ ಎಂಬುದು ಮಾಯೆಯ ದ್ವಾರ. ಮೊಬೈಲ್‌ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸುವಂತೆ ಮಾಡುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ರವಿವಾರ ನಡೆದ ಬ್ರಹೈಕ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಮೊಬೈಲ್‌ ಮಾಯಾಜಾಲದೊಳಗೆ ಸೇರಿ ಪಾಶ್ಚಾತ್ಯ ಪರಂಪರೆಗೆ ದಾಸರಾಗಬಾರದು. ಮೊಬೈಲ್‌ ಎಂಬ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಿ ಒಳಿತಿನೆಡೆಗೆ ಜನರನ್ನು ಕರೆದೊಯ್ಯುವಂತಾಗಲಿ ಎಂದು ಹೇಳಿದರು. ಪೀಠ ಮತ್ತು ಪೀಠಾಧಿಪತಿಗಳ ಬಗ್ಗೆ ಕೀಳಾಗಿ ಮಾತಾಡುವುದು ಸಲ್ಲ  ಎಂದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಗಳು ಕೆರೆಕೈ ಉಮಾಕಾಂತ ಭಟ್ಟರಿಗೆ ಪಾಂಡಿತ್ಯ ಪುರಸ್ಕಾರ ಮತ್ತು ಹವ್ಯಕ ಮಹಾಮಂಡಲ ತಯಾರಿಸಿದ ‘ಶಿಷ್ಯಬಂಧ’ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next