Advertisement

ರಾಘವೇಶ್ವರ ಶ್ರೀ ಪೀಠ ತ್ಯಜಿಸಲಿ: ಹವ್ಯಕ ಒಕ್ಕೂಟ

06:35 AM Sep 30, 2018 | Team Udayavani |

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಪೀಠ ತ್ಯಜಿಸಬೇಕು ಎಂದು ಅಖೀಲ ಹವ್ಯಕ ಒಕ್ಕೂಟ ಒತ್ತಾಯಿಸಿದೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯ ಶಾಂತರಾಮ ಹೆಗಡೆಕಟ್ಟೆ ಮಾತನಾಡಿ, ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ರಾಮಚಂದ್ರಾಪುರ ಮಠದ ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿವೆ. ಈ ಅವಧಿಯಲ್ಲಿ ಅವರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಯಾಗಿರುವುದಲ್ಲದೆ ಆರೋಪಿ ಸ್ಥಾನದಲ್ಲಿದ್ದಾರೆ. ಅವರಿಂದಾಗಿ ಶಂಕರಚಾರ್ಯ ಪೀಠಗಳಲ್ಲಿ ಒಂದಾಗಿರುವ ರಾಮಚಂದ್ರಾಪುರ ಮಠಕ್ಕೂ ಅಪಾವಾದಗಳು ಬರುತ್ತಿದೆ. ಮಠದ ಖ್ಯಾತಿಗೆ ಧಕ್ಕೆ ಬರುತ್ತಿದೆ ಹೀಗಾಗಿ ರಾಘವೇಶ್ವರ ಸ್ವಾಮೀಜಿ ಅವರು ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿದರು.

ಶಂಕರಾಚಾರ್ಯ ಪೀಠಗಳಲ್ಲಿನ ಸ್ವಾಮೀಜಿಗಳು ಅನುಸರಿಸಬೇಕಾದ ಕಠಿಣ ಜೀವನ ಕ್ರಮ ಹೇಗಿರಬೇಕೆಂದು ಶಂಕರಚಾರ್ಯರು ಮಠಾಮ್ನಾಯ ಗ್ರಂಥದಲ್ಲಿ ತಿಳಿಸಿದ್ದಾರೆ. ಆ ಜೀವನ ಕ್ರಮಕ್ಕೆ ವಿರುದ್ಧವಾಗಿ ರಾಘವೇಶ್ವರ ಶ್ರೀಗಳು ನಡೆದುಕೊಳ್ಳುತ್ತಿದ್ದಾರೆ. ಸನ್ಯಾಸ ಜೀವನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶೃಂಗೇರಿ ಶಾರಾದ ಮಠದ ಭಾರತಿ ತೀರ್ಥ ಸ್ವಾಮೀಜಿ ಅವರ ನೇತೃತ್ವದ ಸನಾತನ ಧರ್ಮ ಸಂವಧೀìನಿ ಸಭೆಯಿಂದ ರಾಘವೇಶ್ವರ ಸ್ವಾಮೀಜಿ ಅವರನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

ಮೊದಲ ಸಂತ್ರಸ್ಥೆಯ ಅತ್ಯಾಚಾರ ಆರೋಪದಲ್ಲಿ ಸ್ವಾಮೀಜಿ ಅವರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಕೋರ್ಟ್‌ ತಿಳಿಸಿದೆ. ಅಲ್ಲದೆ ಈ ಸಂತ್ರಸ್ಥೆಯ ಭಾವ ಶ್ಯಾಮಪ್ರಸಾದ ಶಾಸಿŒ ಅವರು ಸ್ವಾಮೀಜಿ ಅವರ ಬೆದರಿಕೆ ಮತ್ತು ಒತ್ತಡಗಳಿಂದಾಗಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ವಿಭಾಗ ಪುತ್ತೂರಿನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ. ಎರಡನೇ ಸಂತ್ರಸ್ಥೆಯ ವಿಚಾರದಲ್ಲಿ ಸಿಐಡಿ ವಿಭಾಗ ಸ್ವಾಮೀಜಿ ಅವರ ಮೇಲೆ ಸಾಕ್ಷ್ಯಾಧಾರ ಸಮೇತ ಅತ್ಯಾಚಾರದ ಆರೋಪ ಪಟ್ಟಿ ಸಲ್ಲಿಸಿದೆ. ಹೀಗೆ ಪ್ರಮುಖ ಪ್ರಕರಣಗಳಲ್ಲಿ ಇವರು ಆರೋಪಿತ ಸ್ಥಾನದಲ್ಲಿದ್ದಾರೆ. ಇದು ಮಠಕ್ಕೆ ಅವಮಾನಕಾರ ವಿಷಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದ ಸದಸ್ಯ ಗಣೇಶ ಭಟ್‌ ಬಾಯರ್‌ ಮಾತನಾಡಿ, ಸ್ವಾಮೀಜಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಗೋವಿನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಮಠದ ಹೆಸರಿನಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ತೆರೆದಿರುವ ಗೋ ಸಂರಕ್ಷಕ ಘಟಕಗಳಲ್ಲಿರುವ ಗೋವುಗಳು ಆಹಾರವಿಲ್ಲದೆ ಅಶಕ್ತವಾಗಿವೆ. ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದಲ್ಲದೆ ಭಕ್ತಿಯ ಹೆಸರಿನಲ್ಲಿ ಹವ್ಯಕ ಸಮುದಾಯವನ್ನು ಒಡೆಯುತ್ತಿದ್ದಾರೆ. ಹಿಂದು ಸಂಘಟನೆಗಳ ಹೆಸರನ್ನು ಬಳಸಿಕೊಂಡು ತಮ್ಮ ವಿರುದ್ಧ ದಾಖಲಾದ ಪ್ರಕರಣಗಳಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

Advertisement

ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಬೇಕು. ಸರ್ಕಾರ ಆರೋಪಿಯ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಬಂಧಿಸಿ ಬೇರೆ ಆರೋಪಿಗಳಂತೆ ವಿಚಾರಣೆಗಳೊಪಡಿಸಬೇಕು. ಸಂತ್ರಸ್ಥೆಯರಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶ್ಯಾಮಪ್ರಸಾದ ಶಾಸಿŒ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಸ್ವಾಮೀಜಿ ಪರವಾಗಿ ವಂಚನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next