Advertisement

ಕನ್ನಡ ನಾಡು ನುಡಿ ಸಂಸ್ಕೃತಿ ಸಂರಕ್ಷಣೆಗೆ ಕಂಕಣಬದ್ಧರಾಗಿ : ರಾಧಾಕೃಷ್ಣ ಕಲ್ಚಾರ್‌

12:31 AM Sep 22, 2019 | Sriram |

ಮಂಜೇಶ್ವರ: ಕನ್ನಡ ನಾಡು ನುಡಿ ಸಂರಕ್ಷಣೆಗೆ ನಾವು ಕಂಕಣಬದ್ಧರಾಗಿರಬೇಕು. ಅಧ್ಯಾಪಕರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಇದೆ. ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಭವಿಷ್ಯವನ್ನು ಬೆಳಗಿಸಲು ಸಾಧ್ಯ. ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿ ಸುತ್ತಾ ಕಾರ್ಯನಿರ್ವಹಿಸುವಾಗ ಸಾಮಾಜಿಕ ವ್ಯವಸ್ಥೆಯು ಅದಕ್ಕೆ ಪೂರಕವಾಗಿ ವರ್ತಿಸಬೇಕಾಗು ತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಅಂಕಣ ಬರಹಗಾರ, ಅರ್ಥದಾರಿ ರಾಧಾಕೃಷ್ಣ ಕಲ್ಚಾರ್‌ ಅವರು ಅಭಿಪ್ರಾಯಪಟ್ಟರು.ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಂಘಟನೆಯ ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲ ಕೆ. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್‌ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ್‌ ಕೆ. ಆರ್‌, ಎಸ್‌.ಎ.ಟಿ. ಎಲ್‌.ಪಿ. ಶಾಲೆಯ ಮುಖ್ಯೋಪಾಧ್ಯಾಯತೇಜಸ್‌ ಕಿರಣ್‌, ನಿವೃತ್ತ ಮುಖ್ಯ ಶಿಕ್ಷಕರಾದ ಟಿ.ಡಿ.ಸದಾಶಿವ ರಾವ್‌, ಸತ್ಯನಾರಾಯಣ ಭಟ್‌, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಕುಮಾರಿ ಟೀಚರ್‌ ಉಪಸ್ಥಿತರಿದ್ದರು. ಉಪಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್‌ ಪಾಲೆಂಗ್ರಿ ಸ್ವಾಗತಿಸಿದರು. ಉಪಜಿಲ್ಲಾ ಜತೆ ಕಾರ್ಯದರ್ಶಿ ಸದಾಶಿವ ಪೊಯೆ ವಂದಿಸಿದರು. ಉಪಜಿಲ್ಲಾ ಸಮಿತಿ ಸದಸ್ಯರಾದ ರಾಜಾರಾಮ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಸಮಿತಿಯ ಅಶೋಕ್‌ ಕೊಡ್ಲಮೊಗರು ನೂತನ ಪದಾ ಧಿಕಾರಿಗಳನ್ನು ಆಯ್ಕೆ ಮಾಡಲು ಸಹಕರಿಸಿದರು. ಉಪಜಿಲ್ಲಾ ಘಟಕದ ಜೊತೆ ಕಾರ್ಯದರ್ಶಿ ಜೀವನ್‌ ಕುಮಾರ್‌ ಸ್ವಾಗತಿಸಿದರು. ಮಂಜೇಶ್ವರ ಪಂಚಾಯತ್‌ ಸಮಿತಿ ಕಾರ್ಯದರ್ಶಿ ಕುಂಜತ್ತೂರು ಶಾಲೆಯ ಕವಿತ ಕೂಡ್ಲು ವಂದಿಸಿದರು. ಕೇಂದ್ರ ಸಮಿತಿ ಸದಸ್ಯರಾದ ಜಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು. ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಕೆ. ಅವರು ಧ್ವಜಾರೋಹಣಗೈದರು. ಉಪಜಿಲ್ಲಾ ಕಾರ್ಯದರ್ಶಿ ಜಯಪ್ರಶಾಂತ್‌ ಪಾಲೆಂಗ್ರಿ ವಾರ್ಷಿಕ ವರದಿ ಮಂಡಿಸಿದರು. ಉಪಜಿಲ್ಲಾ ಸಮಿತಿ ಕೋಶಾಧಿ ಕಾರಿ ನಯನ ಪ್ರಸಾದ್‌ ಎಚ್‌.ಟಿ. ಲೆಕ್ಕ ಪತ್ರ ಮಂಡಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ
ನೂತನ ಸಮಿತಿಗೆ ಅಧ್ಯಕ್ಷೆಯಾಗಿ ಪೈವಳಿಕೆ ನಗರ ಶಾಲೆಯ ಶಶಿಕಲ ಕೆ, ಉಪಾಧ್ಯಕ್ಷರಾಗಿ ಮಂಗಲ್ಪಾಡಿ ಪ್ರೌಢಶಾಲೆಯ ಸುನಿತ ಎ. ಹಾಗೂ ಉದ್ಯಾವರ ತೋಟಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್‌, ಕಾರ್ಯದರ್ಶಿಯಾಗಿ ಕುಳೂರು ಶಾಲೆಯ ಜಯಪ್ರಶಾಂತ್‌ ಪಾಲೆಂಗ್ರಿ, ಜೊತೆ ಕಾರ್ಯದರ್ಶಿಗಳಾಗಿ ಕವಿತ ಕೂಡ್ಲು ಹಾಗೂ ಸದಾಶಿವ ಪೊಯೆ, ಕೋಶಾ ಧಿಕಾರಿಯಾಗಿ ಆನೆಕಲ್ಲು ಶಾಲೆಯ ಜೀವನ್‌ ಕುಮಾರ್‌ ಆಯ್ಕೆಯಾದರು.ರಂಗ ಕಲಾವಿದ ಸದಾಶಿವ ಪೊಯೆÂ, ವಸಂತ ಮೂಡಂಬೈಲ್‌, ಉಮೇಶ್‌ ನಾಯ್ಕ, ಆದಿನಾರಾಯಣ ಭಟ್‌ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಸಿದರುಅನಂತರ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ್‌ ಕೆ.ಆರ್‌, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್‌ ಪಿ.ಬಿ, ಸಂಘಟನೆಯ ಉಪಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಶಿವರಾಮ ಭಟ್‌, ಉಪಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸುನಿತ ಎ, ಕೇಂದ್ರ ಸಮಿತಿ ಸದಸ್ಯರಾದ ಸುಕೇಶ್‌ ಎ.ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next