Advertisement

ಬುಲೇರೊ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು

09:12 PM Feb 28, 2022 | Team Udayavani |

ರಬಕವಿ-ಬನಹಟ್ಟಿ : ಮಹಾಲಿಂಗಪೂರ-ರಬಕವಿ ರಾಜ್ಯ ಹೆದ್ದಾರಿಯ ರಬಕವಿಯ ಉರಭಿನವರ ಪೆಟ್ರೋಲ್‌ಬಂಕ್ ಬಳಿ ಸೋಮವಾರ ಬೆಳಿಗ್ಗೆ ಬೊಲೇರೋ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಕಿರಣ ಕವಟಗಿ(42) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Advertisement

ರಬಕವಿಯ ನಿವಾಸಿಯಾಗಿರುವ ಅವರು ಟಿವಿಎಸ್ ಎಕ್ಸ್ಎಲ್ ಬೈಕ್ ಮೇಲೆ ಕುಳಿತು ರಬಕವಿ ಕಡೆಯಿಂದ ಮಹಾಲಿಂಗಪೂರ ರಸ್ತೆ ಹಿಡಿದು ಹೋಗಿ ಬಂಕ್ ಎದುರುಗಡೆ ಬಲಗಡೆ ಬಲಗೈ ಮಾಡಿ ಬೈಕ್ ಬಲಕ್ಕೆ ತಿರುಗಿಸುತ್ತಿದ್ದಾಗ ಬೋಲೇರೋ ವಾಹನವನ್ನು ಹಾಯಿಸಿ ಅಪಘಾತಪಡಿಸಿ ಭಾರಿ ಗಾಯ, ಒಳಪೆಟ್ಟುಪಡಿಸಿದ್ದರಿಂದ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆಂದು ಮೃತನ ಪತ್ನಿ ಮಂಗಲಾ ಫರ‍್ಯಾಧಿಯಲ್ಲಿ ದಾಖಲಿಸಿದ್ದಾರೆ.

ಬೋಲೇರೋ ವಾಹನ ಚಾಲಕ ಸಮೇತ ವಾಹನವನ್ನು ಜಪ್ತಿ ಮಾಡಲಾಗಿದ್ದು ತನಿಖೆ ಮುಂದುವರೆಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ನಟ ನಿಖಿಲ್ ಕುಮಾರಸ್ವಾಮಿ ಕಾಲ್ನಡಿಗೆ

Advertisement

Udayavani is now on Telegram. Click here to join our channel and stay updated with the latest news.

Next