Advertisement

ಇನ್ನೆರಡು ಮೂರು ದಿನಗಳಲ್ಲಿ ನೀನು ಮಂತ್ರಿ‌ ಆಗ್ತೀಯ : ಆರ್ ಶಂಕರ್ ಗೆ ಸಿಎಂ ಶುಭನುಡಿ

12:58 PM Jan 05, 2021 | Team Udayavani |

ಬೆಂಗಳೂರು : ಎಂಎಲ್ ಸಿ ಆರ್ ಶಂಕರ್ ಅವರಿಗೆ ಮಂಗಳವಾರ ಶುಭದಿನವಾಗಿದೆ, ಇಂದು ಮುಂಜಾನೆಯೇ ಮುಖ್ಯಮಂತ್ರಿಗಳು ಆರ್ ಶಂಕರ್ ಅವರನ್ನು ಕರೆದು ಇನ್ನು ಎರಡು ಮೂರು ದಿನಗಳಲ್ಲಿ ಮಂತ್ರಿ ಆಗುತ್ತೀಯ ಎಂದು ಹೇಳುವ ಮೂಲಕ ಶುಭ ಸುದ್ದಿಯನ್ನು ನೀಡಿದ್ದಾರೆ.

Advertisement

ಶಂಕರ್ ಎಂದಿನಂತೆ ಗೃಹ ಕಚೇರಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಿದ್ದ ಸಂದರ್ಭ ಮುಖ್ಯಮಂತ್ರಿಗಳು ಸ್ವತಃ ಅವರೇ ನನ್ನನ್ನು ಕರೆದು ಬಾ ಕೂತ್ಕೋ, ತಿಂಡಿ ಮಾಡು ಅಂದ ಸಿಎಂ ಇನ್ನೆರಡು ಮೂರು ದಿನಗಳಲ್ಲಿ ನೀನು ಮಂತ್ರಿ‌ ಆಗ್ತೀಯ ಎಂದಿದ್ದಾರೆ ಈ ಮಾತು ಕೇಳಿದ ಶಂಕರ್ ಖುಷಿಗೊಂಡಿದ್ದರೆ.

ಅಲ್ಲದೆ ಉಮೇಶ್ ಕತ್ತಿ ಜೊತೆ ಚಹಾ ಕುಡಿಯುವ ವೇಳೆ ಅವರಿಗೂ ಮಂತ್ರಿಯಾಗುವ ಭರವಸೆಯನ್ನು ನೀಡಿದ್ದರು ಎನ್ನುವ ಮಾಹಿತಿಯನ್ನು ಹೇಳಿದ್ದಾರೆ.

ಇದನ್ನೂ ಓದಿ:ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ: ಸಿಎಂ ಯಡಿಯೂರಪ್ಪ

ಈ ಕುರಿತು ಮಾತನಾಡಿದ ಶಂಕರ್ ಈಗ ವಾತಾವರಣ ತಿಳಿಯಾಗಿದೆ ನಾನು ಮಂತ್ರಿ ಆಗುವ ಭರವಸೆ ಇದೆ.ಇವತ್ತು ಸಂಜೆಗೇ ಮಂತ್ರಿ ಆದರೂ ಆಗಬಹುದು ಹೇಳಕ್ಕಾಗಲ್ಲ. ಸಿಎಂ ಯಾರು ಯಾರನ್ನು ಮಂತ್ರಿ ಮಾಡ್ತಾರೋ ನೋಡಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next